ಒಂದು ಕಡೆ ಕರ್ನಾಟಕದ ರಾಜಕಾರಣಿಗಳು ಕರ್ನಾಟಕದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ಇನ್ನೊಂದು ದೃಶ್ಯ ಮಾಧ್ಯಮಗಳು ಮಾನ ಮರ್ಯಾದೆ ಹರಾಜು ಹಾಕಲು ಕೂತಿದೆ.
ಬ್ರೇಕಿಂಗ್ ಸುದ್ದಿ ನೀಡುವ ಭರಾಟೆಯಲ್ಲಿ ನಾಯಿ ಕಾಲು ಎತ್ತದೆ ಮೂತ್ರ ಹೊಯ್ದರೂ ಬ್ರೇಕಿಂಗ್ ಸುದ್ದಿಯಾಗುವ ಕಾಲ ಬಂದಿದೆ.
ಕುಮಾರಸ್ವಾಮಿ ಬಜೆಟ್ ಮಂಡಿಸುವ ದಿನ ಬಿಟಿವಿ ಕಾಗೆಯೊಂದನ್ನು ಬ್ರೇಕಿಂಗ್ ಸ್ಕ್ರೀನ್ ಮೇಲೆ ತಂದಿತ್ತು. ಜನ ಈ ಬಗ್ಗೆ ಛೀ..ಥೂ ಉಗಿದ್ರು ಕೂಡಾ, ಕನಿಷ್ಟ ತಪ್ಪಾಯ್ತು ಎಂದು ಹೇಳುವ ಸೌಜನ್ಯವನ್ನು ಚಾನೆಲ್ ತೋರಲಿಲ್ಲ.
ಇನ್ನೂ ಒಂದು ಹೆಜ್ಜೆ ಮುಂದೆ ಪಬ್ಲಿಕ್ ಟಿವಿ, ಸಿಎಂ ಗೃಹ ಕಚೇರಿ ಕೃಷ್ಣಾದ ಗಡಿಯಾರವನ್ನು ಬ್ರೇಕಿಂಗ್ ಸುದ್ದಿ ಮಾಡಿತ್ತು. ಗಡಿಯಾರ ನಿಂತು ಹೋಗಿದೆ, ಸಿಬ್ಬಂದಿ ಹೊಸ ಶೆಲ್ ಹಾಕಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿತ್ತು.
ಅಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಜನ ಹಿಗ್ಗಾ ಮುಗ್ಗಾ ಜಾಡಿಸಿದ್ರು, ಅಲ್ಲಾ ಸ್ವಾಮಿ ಎಲ್ಲಾ ಗಡಿಯಾರಕ್ಕೆ ಬ್ಯಾಟರಿ ತಾನೇ ಹಾಕೋದು..ಮತ್ತೇನೂ ಡೀಸೆಲ್ ಹಾಕ್ತಾರ ಎಂದು ಪ್ರಶ್ನಿಸಿದರು.
ಪತ್ರಿಕೋದ್ಯಮದ ಪಾಠ ಮಾಡುವ ಚಾನೆಲ್ ಮುಖ್ಯಸ್ಥರು ಇಂತಹುದೊಂದು ಪ್ರಮಾದದ ಸುದ್ದಿ ನಮ್ಮಲ್ಲಿ ಹೋಗಿದೆ, ಕ್ಷಮಿಸಿ ಅನ್ನಲೇ ಇಲ್ಲ.

ಹಾಗಂತ ಅವರು ಕ್ಷಮೆ ಕೇಳುವುದಾಗಲಿ, ವಿಷಾಧ ವ್ಯಕ್ತಪಡಿಸುವ ಕೆಲಸ ಮಾಡುವುದೇ ಇಲ್ಲ. ಯಾಕಂದ್ರೆ ಇಂತಹ ಸುದ್ದಿಗಳನ್ನು ಹಾಕಿದ್ರೆ ಜನ ನೋಡೋದು, ರೇಟಿಂಗ್ ಬರೋದು ಅನ್ನೋದು ವಾಹಿನಿಗಳಿಗೆ ಗೊತ್ತಿದೆ.


ಹಾಗಿದ್ದ ಮೇಲೆ ನೀವು ಗಬ್ಬು ನಾರುವಷ್ಟರ ಮಟ್ಟಿಗೆ ಉಗಿದರೂ ಪ್ರಯೋಜನವೇ ಇಲ್ಲ.

ಜನ ಉಗಿಯುತ್ತಾರೆ ಅಂದರೆ ಚಾನೆಲ್ ನೋಡ್ತಾರೆ ಎಂದೇ ಅರ್ಥ. ಹಾಗಿದ್ದ ಮೇಲೆ ರೇಟಿಂಗ್ ಬರ್ಲೇ ಬೇಕು ಅನ್ನುವುದು ವಾಹಿನಿಗಳ ಲೆಕ್ಕಚಾರ.

Discussion about this post