ಪುಕ್ಸಟ್ಟೆ ಲೈಫು ಸಿನಿಮಾವನ್ನ ಜನರ ಮುಂದಿಡುವ ಮುನ್ನ ನಿರ್ದೇಶಕ ಅರವಿಂದ್ ಕುಪ್ಲೀಕರ್ ಸಾಂಗ್ ರಿಲೀಸ್ ಮಾಡ್ತಿದ್ದಾರೆ. ಅದು ಯಾವುದೋ ಸಾಂಗ್ ಅಲ್ಲ ಬದಲಾಗಿ ಸ್ವಾಮಿ ಶರಣಂ ಎನ್ನುವ ಭಕ್ತಿ ಗೀತೆಯನ್ನ ಅಯ್ಯಪ್ಪ ಭಕ್ತರಿಗೆಂದೇ ಮೀಸಲಿಟ್ಟಿದ್ದಾರೆ.
ಈ ಸಾಂಗ್ ಶುಕ್ರವಾರ 10 ಜನವರಿಯಂದು ಬೆಳಗ್ಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತಿಯ ಸುಧೆ ಹರಿಸಲಿದೆ.
ರಾಷ್ಟ್ರ ಪಶಸ್ತಿ ವಿಜೇತ ಸಂಚಾರಿ ವಿಜಯ್ ಮುಖ್ಯ ಭೂಮಿಕೆಯ ಪುಕ್ಸಟ್ಟೆ ಲೈಫು, ಎಮ್ ಎಸ್ ರಮೇಶ್ ಬರೆದ ಕಥೆಯನ್ನಾಧರಿಸಿ ಸೃಷ್ಟಿಸಿದರೂ ಅರವಿಂದ್ ಸ್ವತಃ ಸನಿಮಾ ಗೆ ಹೋಲುವ ಡೈಲಾಗ್ ಬೆರೆದು ಕಥೆಯನ್ನು ಮರುಸೃಷ್ಠಿಸಿ ಜೀವ ತುಂಬಿಸಿದ್ದಾರೆ. ಅದರಲ್ಲೂ ಕಲಾವಿದರೆಲ್ಲರೂ ರಂಗಭೂಮಿ ಕಲಾವಿದರೆ ಅನ್ನುವುದು ವಿಶೇಷ. ಇನ್ನೊಂದೆಡೆ ಈ ಚಿತ್ರವನ್ನು ಪ್ರಯೋಗಾತ್ಮಕ ಸಿನಿಮಾ ಎಂದೆ ಕರೆಯಲಾಗುತ್ತಿದೆ. ಆದರೆ ಕಮರ್ಷಿಯಲ್ ಟಚ್ ಇಲ್ಲ ಎಂದು ಹೇಳುವಂತಿಲ್ಲ.
ಹೀಗಿರುವಾಗ ಅಯ್ಯಪ್ಪ ಭಕ್ತರ ಕೂಗು ಕೇಳಿದಂತೆ ಧನುರ್ಮಾಸದ ಚಳಿಬಿಡಿಸಿ ಕುಣಿಯುವಂತೆ ಮಾಡುವ ಹಾಡೊಂದರ ಬಿಡುಗಡೆ ಸ್ವಾಗತಾರ್ಹ.
ಪುಕ್ಸಟ್ಟೆ ಲೈಫು ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ದೇವರಿಗೆ ತಮ್ಮ ಕಾಣಿಕೆಯನ್ನಾಗಿ ಈ ಸಾಂಗ್ ಹೊರಬೀಳುತ್ತಿದೆ.
ಸೀರಿಯಸ್ ಆಗಿ ಹೇಳಬೇಕೆಂದ್ರೆ ಇದು ಕಾಮಿಡಿ ಕಿಕ್ ನೀಡೋ ಚಿತ್ರ . ಸಂಚಾರಿ ವಿಜಯ್ ತಂಡದೊಂದಿಗೆ ರಂಗಕ್ಷೇತ್ರದಲ್ಲಿ ಇಂಚಿಂಚು ಬಿಡದೆ ಡೈಲಾಗ್ ಹೊಡೆದು ತಮ್ಮ ನಟನೆಯಿಂದ ಪ್ರೇಕ್ಷಕರ ಮನ ಗೆದ್ದ ರಂಗಾಯಣ ರಘು ಮತ್ತು ಅಚ್ಯುತ್ ಕುಮಾರ್ ಚಿತ್ರದ ಸ್ವರ್ಣಾಶ್ವಗಳಿದ್ದಂತೆ. ಇದಕ್ಕಿಂತ ಹೆಚ್ಚೇನು ಬೇಕು ಎನ್ನುತ್ತಾ ಸರ್ವಸ್ವ ಪ್ರೊಡಕ್ಷನ್ಸ್ ಜನರಿಗೆ ಶ್ರೀಘ್ರದಲ್ಲೆ ಚಿತ್ರದ ರಸದೌತಣಕ್ಕೆ ಆಮಂತ್ರಣ ನೀಡಲಿದೆ. ಅಲ್ಲಿಯವರೆಗು ಸ್ವಾಮಿ ಶರಣಂ.
Discussion about this post