ಜೂನ್ ತಿಂಗಳಲ್ಲಿ ಪ್ರಸಾರ ಪ್ರಾರಂಭಿಸಿದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ತೆರೆ ಬೀಳಲು ಕೆಲವೇ ವಾರಗಳು ಬಾಕಿ. ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಕೋಟ್ಯಧಿಪತಿಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ.

ಈ ನಡುವೆ ಕೊನೆಯ ಸಂಚಿಕೆಗಳನ್ನು ಪವರ್ ಸ್ಟಾರ್ ನಡೆಸಿಕೊಳ್ಳುವುದಿಲ್ಲ ಅನ್ನುವ ಸುದ್ದಿಯೊಂದು ಕೋಟ್ಯಧಿಪತಿ ಮನೆಯಿಂದ ಹೊರ ಬಿದ್ದಿದೆ. ಈ ಹಿಂದೆ ಮೊದಲ ಎರಡು ಸೀಸನ್ ಗಳನ್ನು ಪುನೀತ್ ರಾಜ್ ಕುಮಾರ್ ನಡೆಸಿಕೊಟ್ಟಿದದರು. ಬಳಿಕ ಮೂರನೇ ಸೀಸನ್ ಅನ್ನು ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದರು. ಮತ್ತೆ ನಾಲ್ಕನೇ ಸೀಸನ್ ಗೆ ಪುನೀತ್ ರಾಜ್ ಕುಮಾರ್ ಎಂಟ್ರಿ ಕೊಟ್ಟಿದ್ದರು.
ಇದೀಗ ಕೋಟ್ಯಧಿಪತಿ ಮನೆಯಿಂದ ಅಚ್ಚರಿಯ ವಿಷಯವೊಂದು ಹೊರ ಬಿದ್ದಿದ್ದು, ಪುನೀತ್ ಜಾಗದಲ್ಲಿ ಮತ್ತೊಬ್ಬ ನಿರೂಪಕಿ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಜಾಗದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದು, ಅವರೇ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಇನ್ನು ಪುನೀತ್ ರಾಜ್ ಕುಮಾರ್ ಹಾಟ್ ಸೀಟ್ ನಲ್ಲಿ ಕೂರಲಿದ್ದು, ರಚಿತಾ ರಾಮ್ ನಿರೂಪಣೆ ಮಾಡಲಿದ್ದಾರೆ. ಆದರೆ ಪವರ್ ಸ್ಟಾರ್ ಗೆ ಏನೆಲ್ಲಾ ಪ್ರಶ್ನೆಗಳು ಎದುರಾಗಲಿದೆ ಅನ್ನುವುದಕ್ಕೆ ಸಂಚಿಕೆ ಪ್ರಸಾರವಾಗುವುದನ್ನೇ ಕಾಯಬೇಕಾಗಿದೆ.
ಅಲ್ಲಿಗೆ ಕೋಟ್ಯಧಿಪತಿ ಕಾರ್ಯಕ್ರಮಕ್ಕೂ ಅದ್ಧೂರಿ ತೆರೆ ಬೀಳಲಿದೆ.

ಈ ಹಿಂದಿನ ಪ್ಲಾನ್ ಪ್ರಕಾರ ಕಿಚ್ಚ ಸುದೀಪ್ ಕೊನೆಯ ಸಂಚಿಕೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಕೊಟಿಗೊಬ್ಬ 3 ಸಲುವಾಗಿ ಅವರು ಪೋಲ್ಯಾಂಡ್ ಗೆ ತೆರಳಿದ್ದಾರೆ. ಹೀಗಾಗಿ ಸುದೀಪ್ ಬದಲು ರಚಿತಾ ರಾಮ್ ಅತಿಥಿ ನಿರೂಪಕಿಯಾಗಿ ಬರಲಿದ್ದಾರೆ.
Discussion about this post