ರಫೇಲ್ ಯುದ್ಧ ವಿಮಾನ ವಿಜಯದಶಮಿ ದಿನವಾದ ಇಂದು ಭಾರತಕ್ಕೆ ಹಸ್ತಾಂತರಗೊಂಡಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ದಿನಗಳ ಕಾಲ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಪ್ಯಾರಿಸ್ನ ಬೊರಾಡೆಕ್ಸ್ ಸಮೀಪದ ಮೆರಿಗ್ನ್ಯಾಕ್ ವಾಯು ನೆಲೆಯಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಮಾಡುವ ಮೂಲಕ ಬರಮಾಡಿಕೊಂಡರು.
ಭಾರತ ಖರೀದಿಸುತ್ತಿರುವ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದು ವಿಮಾನವನ್ನು ಮಾತ್ರ ಫ್ರಾನ್ಸ್ ಹಸ್ತಾಂತರಿಸಿದೆ. ಉಳಿದಂತೆ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ.
ರಫೇಲ್ ಸ್ವೀಕರಿಸಿದ ನಂತ್ರ ಶಸ್ತ್ರಪೂಜೆಯನ್ನು ರಾಜ್ ನಾಥ್ ಸಿಂಗ್ ನೆರವೇರಿಸಿದರು.
ವಿಮಾನದ ಮೇಲೆ ತೆಂಗಿನ ಕಾಯಿ, ವಿಮಾನದ ಹೊರಗಡೆ ಭಾಗದಲ್ಲಿ ಓಂ ಚಿಹ್ನೆ ಬರೆದು, ವಿಮಾನದ ಚಕ್ರಗಳಿಗೆ ನಿಂಬೆ ಹಣ್ಣು ಇಟ್ಟು ಪೂಜೆ ನೆರವೇರಿಸಲಾಯ್ತು.
ಆಯುಧ ಪೂಜೆಯ ಮರು ದಿನ ವಿದೇಶದಲ್ಲಿ ನಡೆದ ಈ ಕಾರ್ಯಕ್ರಮ ಭಾರತೀಯರಿಗೆ ರೋಮಾಚಂನ ಉಂಟು ಮಾಡಿದ್ದು ಸುಳ್ಳಲ್ಲ. ವಿಮಾನದ ಚಕ್ರದ ಕೆಳಗಡೆ ನಿಂಬೆ ಹಣ್ಣು ಇಟ್ಟು, ಅದರ ಮೇಲೆ ಚಕ್ರ ಉರುಳಿಸುವುದನ್ನು ಕಂಡ ಫ್ರಾನ್ಸ್ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.
ಇನ್ನು ಕೆಲ ತಲೆಯಲ್ಲಿ ಮೆದುಳಿಲ್ಲದ ಜೀವಿಗಳು, ಈ ಶಸ್ತ್ರಪೂಜೆಯನ್ನು ಟೀಕಿಸುತ್ತಿವೆ. ವಿದೇಶದಲ್ಲಿ ಹೀಗೆ ಮಾಡಬೇಕಾಗಿತ್ತಾ, ಇದೇನು ಒಂದು ಧರ್ಮಕ್ಕೆ ಸಂಬಂಧಿಸಿದ ವಿಮಾನವೇ ಅನ್ನುವ ಅಸಂಬದ್ಧ ಪ್ರಶ್ನೆಗಳು ಕೇಳಿ ಬರುತ್ತಿವೆ.
ಶಸ್ತ್ರಪೂಜೆಗೆ ಯಾವುದೇ ಧರ್ಮವಿಲ್ಲ. ಭಾರತದ ಸೇನಾಪಡೆಗಳಿಗೆ ಯಾವುದೇ ಹೊಸ ಯುದ್ಧ ವಿಮಾನ, ನೌಕೆ, ಟ್ಯಾಂಕರ್ ಹೀಗೆ ಯಾವುದೇ ಶಸ್ತ್ರ ಬರುವುದಿದ್ದರೆ ಅದಕ್ಕೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಭಾರತದ ನೆಲದಲ್ಲಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ವಿವಿಧ ಧರ್ಮದ ಗುರುಗಳು ಉಪಸ್ಥಿತರಿರುತ್ತಾರೆ. ಇದರ ಅರಿವಿಲ್ಲದ ಮಂದಿ ಇದನ್ನು ಟೀಕಿಸುತ್ತಿರುವುದು ದುರಂತವೇ ಸರಿ.
ಭಾರತದ ಸಂಸ್ಕೃತಿಯಂತೆ ವಿದೇಶಿ ನೆಲದಲ್ಲಿ ಪೂಜೆ ಸಲ್ಲಿಸಲಾಗಿದೆ ಅನ್ನುವುದನ್ನು ನಾವು ಹೆಮ್ಮೆ ಪಡಬೇಕು. ಆಯುಧ ಪೂಜೆ ದಿನ ಪೂಜೆ ಸಲ್ಲಿಸುವಂತೆ ಅಲ್ಲೂ ಪೂಜೆ ಸಲ್ಲಿಸಿದ್ದು ನಮಗೆ ಹೆಮ್ಮೆ ತಾನೇ. ಕುಂಬಳಕಾಯಿ ಒಡೆದಿಲ್ಲ ಅನ್ನುವುದೇ ಬೇಸರ.
Discussion about this post