ಕಿರಿಕ್ ಪಾರ್ಟಿ ಸಿನಿಮಾ ಸಂದರ್ಭದಲ್ಲಿ ಲಹರಿ ಮ್ಯೂಸಿಕ್ ಸಂಸ್ಥೆ ರಕ್ಷಿತ್ ಶೆಟ್ಟಿ ಮೇಲೆ ಮುನಿಸಿಕೊಂಡಿತ್ತು. ಚಿತ್ರದಲ್ಲಿ ಬಳಸಲಾದ ಸಂಗೀತ ಕೃತಿ ಚೌರ್ಯ ಅನ್ನುವುದು ಲಹರಿ ಸಂಸ್ಥೆಯ ವಾದವಾಗಿತ್ತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದಾದ ಬಳಿಕ ಕಿರಿಕ್ ಪಾರ್ಟಿ ತಂಡ ಪ್ರಕರಣವನ್ನು ಗೆದ್ದುಕೊಂಡಿತ್ತು. ಹಾಗಂತ ಕಾನೂನು ಹೋರಾಟ ನಿಂತಿರಲಿಲ್ಲ.
ಈ ಕಾರಣಕ್ಕಾಗಿ ಲಹರಿ ವೇಲು ಮತ್ತು ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿಯೇ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಂಡಿದ್ದರು.
ಇದನ್ನೂ ಓದಿ : ಕಿರಿಕ್ ಪಾರ್ಟಿ ಮೂವಿ ಡೀಲ್ ನಲ್ಲಿ ಸಂಬರಗಿ – ಬಿಗ್ ಬಾಸ್ ಮನೆಯ ಮಾವನ ಮತ್ತೊಂದು ಮುಖ ಅನಾವರಣ
ಇದೀಗ ಅಚ್ಚರಿ ಅನ್ನುವಂತೆ ರಕ್ಷಿತ್ ಶೆಟ್ಟಿ, ಲಹರಿ ವೇಲು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಒಂದಾಗಿದ್ದಾರೆ. ತಮ್ಮ ಹಳೆಯ ಕಹಿ ನೆನಪುಗಳನ್ನು ಸೈಡಿಗಿಟ್ಟು ಕೈ ಕುಲುಕಿದ್ದಾರೆ. ಈ ಮೂಲಕ ಚಂದನವನ ಅನ್ನುವುದು ಜೇನುಗೂಡು ಎಂದು ಸಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಕ್ಷಿತ್ ಶೆಟ್ಟಿ, ‘ಒಂದು ಘಟನೆ, ಹಲವು ದೃಷ್ಟಿಕೋನಗಳು. ದೃಷ್ಟಿಕೋನಗಳನ್ನು ಹಂಚಿಕೊಂಡು, ಅರ್ಥ ಮಾಡಿಕೊಂಡಾಗ ನಾವು ಮನುಷ್ಯರಾಗಿ ಒಗ್ಗೂಡುತ್ತೇವೆ. ಪ್ರೀತಿ ಮತ್ತು ಪರಸ್ಪರ ಗೌರವಗಳಲ್ಲಿ ಎಲ್ಲವೂ ಸೇರಿಕೊಳ್ಳಲೇಬೇಕು. ಅದೇ ಬೆಳವಣಿಗೆಯ ನಿಜವಾದ ಲಕ್ಷಣ’ ಅಂದಿದ್ದಾರೆ.
Discussion about this post