ಬೆಂಗಳೂರು : ರಮೇಶ್ ಜಾರಕಿಹೊಳಿ ಕಾಮಲೀಲೆ ಪ್ರಕರಣದ ಸಂತ್ರಸ್ಥೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದು, ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆಯನ್ನು ದಾಖಲು ಮಾಡಿದ್ದಾರೆ.
3.30ರ ಸುಮಾರಿಗೆ ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹಾಜರಾಗುತ್ತಾರೆ ಎನ್ನಲಾಗಿತ್ತು. ಆದರೆ ಭದ್ರತೆ ಕಾರಣದಿಂದ ಮೂರು ಗಂಟೆ ಸುಮಾರಿಗೆ ನ್ಯಾಯಾಧೀಶರ ಮುಂಜೆ ಹಾಜರಾಗಿರುವ ಸಿಡಿ ಲೇಡಿ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ.

ಸಂತ್ರಸ್ಥೆಯ ವಕೀಲ ಜಗದೀಶ್ ಪ್ರಕಾರ ಭದ್ರತೆಯ ಕಾರಣದಿಂದ ನಿಗದಿತ ಸಮಯಕ್ಕೂ ಮುಂಚೆ ಯುವತಿಯನ್ನು ಹಾಜರುಪಡಿಸಲಾಗಿದೆ. ಗೌಪ್ಯ ಸ್ಥಳದಲ್ಲಿ ನ್ಯಾಯಾಧೀಶರು ಈ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತಿದೆ ಅಂದಿದ್ದಾರೆ.
ಈ ಹೇಳಿಕೆ ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿಯನ್ನು ಸಂಕಷ್ಟಕ್ಕೆ ತಳ್ಳುವ ಸಾಧ್ಯತೆಗಳಿದೆ ಎನ್ನಲಾಗಿದೆ.

ಮಾತ್ರವಲ್ಲದೆ ಇದೀಗ ಪ್ರಕರಣ ಮತ್ತಷ್ಟು ರೋಚಕತೆಯನ್ನು ಪಡೆದುಕೊಳ್ಳಲಿದೆ. ಪ್ರಕರಣದ ತನಿಖಾಧಿಕಾರಿಗಳು ಮುಂದೆ ಏನು ಮಾಡುತ್ತಾರೆ ಅನ್ನುವ ಕುತೂಹಲವಿದೆ.
Discussion about this post