ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್ಐಟಿ ನಿನ್ನೆ 5 ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು.
ಇದೀಗ ಈ ಸಂಖ್ಯೆ 7ಕ್ಕೆ ಏರಿದೆ. ಜೊತೆಗೆ ಕೆಲವೊಂದು ನಿಗದಿತ ಸ್ಥಳಗಳಿಗೆ ದಾಳಿ ಮಾಡಿರುವ ಪೊಲೀಸರು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ವಿಚಾರಣೆಗೆ ಒಳಪಟ್ಟವರ ಖಾತೆಗಳಿಗೆ ಲಕ್ಷ ಲಕ್ಷ ಹಣ ಹರಿದು ಬಂದಿದೆ ಎನ್ನಲಾಗಿದ್ದು, ಹಣದ ಮೂಲದ ಬಗ್ಗೆಯೂ ತನಿಖೆ ಪ್ರಾರಂಭವಾಗಿದೆ.
ಈ ನಡುವೆ ಎಸ್ಐಟಿ ತನಿಖೆಯನ್ನು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಂಶಯ ಬಂದವರೆನ್ನೆಲ್ಲಾ ಬಂಧಿಸಲು ಎಸ್ಐಟಿ ನಿರ್ಧರಿಸಿದೆ ಅಂದಿದ್ದಾರೆ.

ಇನ್ನು ತನಿಖೆಯಲ್ಲಿ ಕಾಂಗ್ರೆಸ್ ನಾಯಕರ ಹೆಸರುಗಳನ್ನು ತೆಗೆದುಕೊಳ್ಳಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ ಅಂದಿರುವ ಡಿಕೆಶಿ ಈ ಬಗ್ಗೆ ನಾವು ಕಾನೂನು ತಜ್ಞರ ಜೊತೆ ಮಾತನಾಡುತ್ತೇವೆ ಅಂದಿದ್ದಾರೆ.
ಇದೀಗ ಡಿಕೆಶಿ ಕೊಟ್ಟಿರುವ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
Discussion about this post