ಬೆಂಗಳೂರು : ಭೂಗತ ಪಾತಕಿ ರಶೀದ್ ಮಲಬಾರಿ ಸಹಚರನೊಬ್ಬ ಬೆಂಗಳೂರಿನಲ್ಲಿ ಬೀದಿ ಹೆಣವಾಗಿದ್ದಾನೆ. ಇದೀಗ ಕೊಲೆ ರಹಸ್ಯದ ಕುರಿತಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇಂಟ್ರರೆಸ್ಟಿಂಗ್ ಮಾಹಿತಿಗಳು ಲಭಿಸಿದೆ.
ಶಿವಾಜಿನಗರದ ಸೈಯದ್ ಕರೀಂ ಆಲಿ ಹತ್ಯೆಯಾದ ವ್ಯಕ್ತಿ, ಶ್ಯಾಂಪುರ ರೈಲ್ವೆ ಗೇಟ್ ಬಳಿ ಸೈಯದ್ ನನ್ನು ಸೋಮವಾರ ರಾತ್ರಿ ಕೆಜಿ ಹಳ್ಳಿಯ ರೌಡಿ ಅನೀಸ್ ಅಹಮ್ಮದ್ ನ ಸಹಚರರು ಕತ್ತು ಸೀಳಿ ಕೊಂದು ಪರಾರಿಯಾಗಿದ್ದರು.
ಅಚ್ಚರಿ ಅಂದ್ರೆ ಅನೀಸ್ ಅಹಮ್ಮದ್ ಕಳೆದ ವರ್ಷ ಪೊಲೀಸರಿಂದ ಗುಂಡೇಟು ತಿಂದು ಜೈಲು ಸೇರಿದ್ದಾನೆ.ಆದರೆ ಪರಪ್ಪನ ಅಗ್ರಹಾರದಲ್ಲೇ ಕೂತೇ ಸೈಯದ್ ಗೆ ಅನೀಸ್ ಸ್ಕೆಚ್ ಹಾಕಿದ್ದಾನೆ. ಇದಕ್ಕೆ ಕಾರಣ ತನ್ನ ಪತ್ನಿಯೊಂದಿಗಿನ ಅನೈತಿಕ ಸಂಬಂಧದ ಶಂಕೆ.
ಯಾವಾಗ ಅನೀಸ್ ಜೈಲು ಸೇರಿದನೋ, ಸೈಯದ್ ಅನೀಸ್ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅನ್ನುವ ಶಂಕೆ ವ್ಯಕ್ತವಾಯ್ತು. ಜೊತೆಗೆ ತಾನು ಜೈಲು ಸೇರಲು ಪೊಲೀಸರಿಗೆ ಸಹಕರಿಸಿದ್ದು ಸೈಯದ್ ನೆರವು ನೀಡಿದ್ದ ಅನ್ನುವ ಶಂಕೆಯೂ ಆತನಿಗಿತ್ತು. ಹೀಗಾಗಿ ಜೈಲಿನಲ್ಲಿ ಕೂತೇ ತನ್ನ ಶತ್ರವಿನ ಕೊಲೆಗೆ ಸಹಚರರಿಗೆ ಆರ್ಡರ್ ಕೊಟ್ಟಿದ್ದ.
ಹಾಗೇ ನೋಡಿದರೆ ಸೈಯದ್ ಕರೀಂ ಅಪರಾಧ ಹಿನ್ನಲೆ ಭೀಕರವಾಗಿದೆ. ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ಈತನ ಮೇಲಿದೆ. ಇದೇ ಕಾರಣಕ್ಕಾಗಿ ಪುಲಕೇಶಿ ನಗರ ಠೆಯಲ್ಲಿ ರೌಡಿ ಶೀಟರ್ ಕೂಡಾ ದಾಖಲಾಗಿದೆ.
Discussion about this post