crossorigin="anonymous"> ನವೆಂಬರ್ 4ರ ಮಧ್ಯರಾತ್ರಿ ಗುರು ಬದಲಾವಣೆ : ಕಟಕ,ಕನ್ಯಾ,ಸಿಂಹ ರಾಶಿಯವರ ಗತಿಯೇನು ಗೊತ್ತಾ... - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ನವೆಂಬರ್ 4ರ ಮಧ್ಯರಾತ್ರಿ ಗುರು ಬದಲಾವಣೆ : ಕಟಕ,ಕನ್ಯಾ,ಸಿಂಹ ರಾಶಿಯವರ ಗತಿಯೇನು ಗೊತ್ತಾ…

Radhakrishna Anegundi by Radhakrishna Anegundi
08-10-19, 7 : 08 pm
in ದೇವನುಡಿ
Share on FacebookShare on TwitterWhatsAppTelegram

ನವೆಂಬರ್ 4ರ ಮಧ್ಯರಾತ್ರಿ ಗುರು ಬದಲಾವಣೆ : ಕಟಕ,ಕನ್ಯಾ, ಸಿಂಹ ರಾಶಿಯವರ ಗತಿಯೇನು ಗೊತ್ತಾ…

2019 ನವೆಂಬರ್ 4 ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಗುರು ಗ್ರಹ ಜ್ಯೇಷ್ಠ ನಕ್ಷತ್ರ 4ನೇ ಪಾದ ವೃಷ್ಚಿಕ ರಾಶಿಯಿಂದ ಮುಂದೆ ಹೋಗಿ ಮೂಲ ನಕ್ಷತ್ರ 1 ನೇ ಪಾದ ಧನು ರಾಶಿಗೆ ಪ್ರವೇಶ ಮಾಡುತ್ತಾನೆ.

https://www.youtube.com/watch?v=6GP9OGuLVmo

ಗುರು ಗ್ರಹದ ಈ ಸಂಚಾರದಿಂದಾಗಿ ದ್ವಾದಶ ರಾಶಿಯ ಗುರು ಬಲದ ವಿಚಾರದಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ. ಈ ಕಾರಣ ಕಟಕ, ಕನ್ಯಾ, ಸಿಂಹ ರಾಶಿಗಳ ಪೈಕಿ ಯಾವ ರಾಶಿಗೆ ಗುರು ಬಲ ಬರಲಿದೆ ಮತ್ತು ಯಾವ ರಾಶಿಗೆ ಗುರು ಬಲ ಮುಗಿಯಲಿದೆ ಅನ್ನುವುದನ್ನು ಖ್ಯಾತ ಜ್ಯೋತಿಷಿಗಳಾದ ವಿಠ್ಠಲ ಭಟ್ ಕೆಕ್ಕಾರು ವಿವರಿಸಿದ್ದಾರೆ.

 ( ನಿಮಗೆ ಯಾವುದಾದರೂ ಸಂಶಯಗಳಿದ್ದಲ್ಲಿ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು ಅವರನ್ನು 9845682380 ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.)

ಕರ್ಕಾಟಕ :  ಈ ಗುರು ಸಂಚಾರದಿಂದಾಗಿ ನಿಜವಾದ ಸಮಸ್ಯೆ ಇರುವುದು ನಿಮಗೆ. ಕಾರಣ ಗುರು ಆರನೆಯ ಮನೆಗೆ ಹೋಗುತ್ತಿದ್ದಾನೆ {ಗಮನಿಸಿ:- ಇನ್ನೊಂದೆಡೆ ಶನಿ ನಿಮಗೆ ಅಲ್ಲಿಯೇ ಆರನೇ ಮನೆಯಲ್ಲಿ ೨೦೨೦ ಜನವರಿ ತನಕ ಇರುತ್ತಾನೆ}. ಆರರಲ್ಲಿ ಗುರು ಉತ್ತಮ ಸ್ಥಿತಿ ಅಲ್ಲ ಅದರ ದುಷ್ಪರಿಣಾಮ ನೀವು ಎದುರಿಸಬೇಕಾಗುತ್ತದೆ.

ಮುಖ್ಯವಾಗಿ ನೀವು ಗಮನಿಸಬೇಕಾದ ವಿಚಾರ ಎಂದರೆ ನೀವು ಸ್ನೇಹಿತರನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.ಇನ್ನೂ ನೋಡಿದರೆ ಈ ಪರಿಸ್ಥಿತಿಯಲ್ಲಿ ಉಂಟಾಗುವ ಆರೋಗ್ಯ ಹಾನಿ ಬಹಳವಾಗಿ ಹೆದರಿಸುತ್ತದೆ ಆದರೆ ನಾವು ಹೆದರಬಾರದು ಧೈರ್ಯವಾಗಿ ಇರಬೇಕು ಹಾಗು ಗುರು ಗ್ರಹದ ಆರಾಧನೆಯನ್ನು ತಪ್ಪದೇ ಮಾಡಬೇಕು.

ವಿವಾಹದ ಪ್ರಯತ್ನಗಳಲ್ಲಿ ಇರುವವರು, ಹೇಳಿಕೆ ಮಾತುಗಳನ್ನು ನಂಬಿ ನೀವೇ ನಿಮ್ಮ ಮದುವೆ ಹಾಳು ಮಾಡಿಕೊಳ್ಳುತೀರಿ ಅಥವಾ ನಿಮ್ಮ ವಿಚಾರದಲ್ಲಿ ಇಲ್ಲ ಸಲ್ಲದನ್ನು ಹೇಳಿಕೊಟ್ಟು ನಿಶ್ಚಯ ಆಗಿರುವ ಅಥವಾ ಆಗಲಿರುವ ನಿಮ್ಮ ಮದುವೆಯನ್ನು ಹಾಳು ಮಾಡುತ್ತಾರೆ.

ನಿಮ್ಮ ಹಾಗೂ ನಿಮ್ಮ ಪಾಲುದಾರರ ನಡುವೆ ಭಿನ್ನಾಭಿಪ್ರಾಯ ಬರಬಹುದು ಅಥವಾ ಯಾವುದೋ ಕಾರಣಗಳಿಂದ ನಿಮ್ಮ ಪಾಲುದಾರಿಕೆ ವ್ಯವಹಾರ ರದ್ದಾಗುತ್ತದೆ. ಕಾರು ಹಾಗು ಬಸ್ಸು ಇತ್ಯಾದಿ ವಾಹನ ಚಾಲಕರು ತಮ್ಮ ಉದ್ಯೋಗವನ್ನು ಇನ್ನೂ ಹೆಚ್ಚಿನ ಶ್ರದ್ದೆಯಿಂದ ಮಾಡಬೇಕು ಹಾಗೂ ಪ್ರತೀ ದಿನ ವಾಹನ ಚಾಲನೆಗೂ ಮೊದಲು ತಾವು ಓಡಿಸುವ ವಾಹನ ಎಲ್ಲಾ ವಿಧದಲ್ಲಿಯೂ ಸರಿಯಾಗಿ ಇದೆಯೇ ಎಂದು ಹೊರಡುವ ಮುನ್ನ ಪರೀಕ್ಷಿಸಿಕೊಳ್ಳಬೇಕು.

ಈ ಆರೋಗ್ಯ ಬಾಧೆಯ ಸಮಸ್ಯೆ ಎಂದರೆ ವೈದ್ಯರಿಗೆ ನಿಮ್ಮ ಆರೋಗ್ಯ ಸಮಸ್ಯೆಗೆ ಕಾರಣ ತಿಳಿಯುವುದಿಲ್ಲ ಅಥವಾ ತಿಳಿದುಕೊಂಡು ನಿಮಗೆ ಔಷಧ ಕೊಟ್ಟರೂ ಸಹ ಆ ಔಷಧಗಳು ನಿಮಗೆ ಕೆಲಸ ಮಾಡುವುದಿಲ್ಲ ಇಲ್ಲಿ ಹೃದಯ ಸಂಬಂಧಿತ ಖಾಯಿಲೆ ಇರುವವರು ಬಹಳ ಎಚ್ಚರವಹಿಸಬೇಕು. ಮುಖ್ಯವಾಗಿ ಪಾಲುದಾರಿಕೆಯಲ್ಲಿ ಮಾಡುತ್ತಿದ್ದ ವ್ಯವಹಾರಗಳಿಗೆ ಏಟು ಬೀಳಲಿದೆ.

( ನಿಮಗೆ ಯಾವುದಾದರೂ ಸಂಶಯಗಳಿದ್ದಲ್ಲಿ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು ಅವರನ್ನು 9845682380 ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.)

ಸಿಂಹ : ಪಂಚಮ ಶನಿಯಿಂದ ಬಳಲಿ ಬೆಂಡಾದ ಸಿಂಹ ರಾಶಿಯವರಿಗೆ ಮುದ ನೀಡುವ ಸಂತಸ ನೀಡುವ ವಿಚಾರ ಎಂದರೆ ನಿಮ್ಮ ರಾಶಿಗೆ ಗುರುಬಲ ಆರಂಭ ಆಗುತ್ತಿದೆ.. ಪರಿಣಾಮ ವೃತ್ತಿಯಲ್ಲಿ ಇರುವವರಿಗೆ ಉತ್ತಮ ಸಮಯ ನಿರೀಕ್ಷಿತ ಭಡ್ತಿ ಅಥವಾ ವರ್ಗಾವಣೆ ಲಭಿಸುತ್ತದೆ.ವಿಶೇಷ ಎಂದರೆ ಇದ್ದಕ್ಕಿದ್ದಂತೆ ನ್ಯಾಯ ನೀತಿ ಬಗ್ಗೆ ಹೆಚ್ಚು ಮಾತನಾಡಲು ಪ್ರಾರಂಭಿಸಿರುತ್ತೀರಿ.

ಅನಿವಾರ್ಯವಾಗಿ ಸಾಲಗಳು ಮಾಡಲೇ ಬೇಕಾದ ಸ್ಥಿತಿ ಇದ್ದಲ್ಲಿ ನಿಮಗೆ ಅನಾಯಾಸವಾಗಿ ಸಾಲ ಸಿಗುತ್ತದೆ. ನಿಮ್ಮ ಮೇಲೆ ಜನಗಳಿಗೆ ನಂಬಿಕೆ ಹೆಚ್ಚಾಗುತ್ತದೆ ಆದರೆ ಆ ನಂಬಿಕೆಯನ್ನು ನೀವು ಎಷ್ಟರ ಮಟ್ಟಿಗೆ ಉಳಿಸಿಕೊಂಡು ಬೆಳೆಸಿಕೊಂಡು ಮುಂದೆ ಸಾಗುತ್ತೀರಿ ಎನ್ನುವುದೇ ಪ್ರಧಾನ ಕಾರಣ ನಿಮಗೆ ಇನ್ನೂ ೨೦೨೦ ಜನವರಿ ತನಕ ಪಂಚಮ ಶನಿ ಬಾಕಿ ಇದೆ.

ಇನ್ನು ಈ ವೃಶ್ಚಿಕ ರಾಶಿಗೆ ಗುರು ಸಂಚಾರ ಕರ್ಕ ರಾಶಿಯವರಿಗೆ ಉತ್ತಮ ವಿದ್ಯೆ ಪಡೆಯಲು ಸಹ ಸಹಕಾರಿ ಆಗುತ್ತದೆ. ಈ ಹಿಂದೆ ಕಾರಣಾಂತರಗಳಿಂದ ನಿಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಲ್ಲಿ ಈಗ ಮತ್ತೆ ಪ್ರಯತ್ನಿಸಿ ಯಶಸ್ವಿಯಾಗಿ ವಿದ್ಯೆಯನ್ನು ಪೂರ್ಣಗೊಳಿಸುತ್ತೀರ. ಇನ್ನು ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದೆವರಿಸಲು ಆಗದವರು ಹೊಸದಾಗಿ ವ್ಯಾಪಾರ ಆರಂಭಿಸಿ ಯಶಸ್ವಿ ಆಗುವ ಸಾಧ್ಯತೆಗಳು ಹೆಚ್ಚು ಇವೆ.

ಅವಿವಾಹಿತರಿಗೆ ವಿವಾಹದ ಮಾತುಕತೆ ಯಶಸ್ವಿಯಾಗಿ ನೆಡೆಯಲಿದೆ. ಈ ಸಮಯವನ್ನು ಪ್ರಮುಖವಾಗಿ ಉಪಯೋಗ ಮಾಡಿಕೊಳ್ಳ ಬೇಕಾದವರು ಸಂತಾನ ಅಪೇಕ್ಷಿತ ದಂಪತಿಗಳು ವಿವಾಹ ಆಗಿ ಬಹಳ ಕಾಲ ಆದರೂ ಇನ್ನೂ ಸಂತಾನ ಆಗಿಲ್ಲ ಎಂದಾದಲ್ಲಿ ಈಗ ಪ್ರಯತ್ನ ಮಾಡಿದರೆ ಉತ್ತಮ ಕಾಲ ಎಂದು ಹೇಳಬಹುದು.

ಇನ್ನು ಸಾಲ ತೀರಿಸ ಬೇಕಾದ ಪರಿಸ್ಥಿತಿಯಲ್ಲಿ ಇರುವವರಿಗೆ ಆ ಮೊತ್ತ ತೀರಿಸುವ ಶಕ್ತಿ ಬರುತ್ತದೆ ಆದರೆ ದುಡ್ಡು ಬಂದ ಮೇಲೆ ಬೇರೆ ಹೊಸ ಆಲೋಚನೆಗಳು ನಿಮ್ಮಲ್ಲಿ ಬರಬಾರದು ಮೊದಲು ಇರುವ ಸಾಲ ಎಲ್ಲಾ ತೀರಿಸಿ ಬಿಡ ಬೇಕು ಅಷ್ಟೆ. ಹೊಸದಾಗಿ ವ್ಯಾಪಾರ ಆರಂಭ ಮಾಡುವ ಉದ್ದೇಶ ಇರುವವರು ನಿಮ್ಮ ಜಾತಕ ಪರಿಶೀಲನೆ ಮಾಡಿಸಿ.

ಕನ್ಯಾ : ಗುರುಗ್ರಹದ ಈ ಚಲನೆಯಿಂದ ನಿಮಗೆ ಗುರು ಬಲದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಕಾರಣ ಈ ಹಿಂದಿನ ವರ್ಷವೂ ಸಹ ನಿಮಗೆ ಗುರುಬಲ ಇರಲಿಲ್ಲ ಈ ವರ್ಷ ಸಹ ಇರುವುದಿಲ್ಲ ಆದುದರಿಂದ ಗುರುಬಲದ ದೃಷ್ಟಿಯಿಂದ ನಾವು ಎನೂ ಹೇಳಲು ಆಗದು. ಆದರೆ ನಿಮ್ಮ ರಾಶಿಯಿಂದ ಗುರು ಚರ್ತುರ್ಥ ಸ್ಥಾನಕ್ಕೆ ಹೋಗುತ್ತಿರುವುದರಿಂದ ಚತುರ್ಥ ಸ್ಥಾನದ ಗುರು ಫಲ ನಿಮಗೆ ದೊರೆಯಲಿದೆ.ಅದರ ಪ್ರಕಾರ ಕೆಲವರಿಗೆ ಆಸ್ತಿ ಜಮೀನು ತೋಟ ಇತ್ಯಾದಿಗಳನ್ನು ಸಂಪಾದಿಸಲೇಬೇಕು ಎನ್ನುವ ಒಂದು ವಿಧದ ಹಠ ಸ್ವಭಾವ ಹೆಚ್ಚುತ್ತದೆ ಆ ವಿಚಾರದಲ್ಲಿ ನಿರಂತರ ಪ್ರಯತ್ನಗಳನ್ನು ನೆಡೆಸುತ್ತಲೇ ಇರುತ್ತೀರಿ.

ಇಲ್ಲಿ ನೀವು ನಿಮ್ಮ ತಂದೆ ತಾಯಿಂದಿರ ವಿಚಾರದಲ್ಲಿ ಅವರ ಆರೋಗ್ಯ ಹಾಗೂ ಮಾನಸಿಕ ಸ್ಥಿತಿ ಗತಿಗಳತ್ತ ಹೆಚ್ಚು ಗಮನಹರಿಸಲೇ ಬೇಕು. ವೃಥಾ ಪ್ರಯಾಣಗಳು ಇತರರಿಗಿಂತ ನಿಮಗೆ ತುಸು ಹೆಚ್ಚು ಆಗುತ್ತದೆ. ಹೊಂದಾಣಿಕೆ ಮಾಡಿಕೊಂಡು ಸಾಗಿದರೆ ಮಾತ್ರ ಅತ್ಯುತ್ತಮ. ನಿಮ್ಮ ಅರಿವಿಗೆ ಬಾರದೆಯೇ ನಿಮ್ಮಲ್ಲಿ ಸ್ವಲ್ಪ ಆತುರ ಬುದ್ದಿ ಹೆಚ್ಚಾಗುತ್ತದೆ.

ಇನ್ನು ನೀವು ಕಷ್ಟ ಪಟ್ಟು ಸಂಪಾದನೆ ಮಾಡಿದ್ದು ಅಲ್ಲದೇ ಪಿತ್ರಾರ್ಜಿತ ಆಸ್ತಿ ನಿಮ್ಮ ಬಳಿ ಇದ್ದಲ್ಲಿ ನೀವು ಆ ಸಂಪತ್ತು ಹಾಳು ಮಾಡುವ ಅಥವಾ ವ್ಯರ್ಥ ಮಾಡುವ ಸಾಧ್ಯತೆಗಳು ಹೆಚ್ಚು ಇವೆ. ನಿಮ್ಮ ಸ್ವಯಾರ್ಜಿತ ಆಸ್ತಿಪಾಸ್ತಿಗಳ ವಿಚಾರದಲ್ಲಿ ತೊಂದರೆ ಇಲ್ಲ ಆದರೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡುವ ಅನಿಸಿಕೆಗಳು ಇದ್ದಲ್ಲಿ ಪುನಃ ಪರಿಶೀಲನೆ ಮಾಡುವುದು ಉತ್ತಮ. ಇಲ್ಲಿ ಇನ್ನೊಂದು ಸ್ವಾರಸ್ಯಕರ ವಿಚಾರ ಎಂದರೆ ನಿಮ್ಮ ಕಷ್ಟಾರ್ಜಿತ ಸಂಪಾದನೆ ವೃದ್ದಿಸುತ್ತದೆ ಪಿತ್ರಾರ್ಜಿತ ನಾಶ ಆಗುತ್ತದೆ.

ಇನ್ನು ಸಂತಾನ ಇಲ್ಲದ ಹಾಗೂ ಇನ್ನು ಸಂತಾನವೇ ಆಗೊದಿಲ್ಲ ಎಂದು ಧೃಢೀಕರಣ ಆದ ದಂಪತಿಗಳಿಗೆ ದತ್ತು ಪುತ್ರ ಸ್ವೀಕಾರ ಯೋಗ ಸಹ ಈ ಸಮಯದಲ್ಲಿ ಬರುತ್ತದೆ. ಮುಂದೆ ಅಂದರೆ ಜನವರಿ ೨೦೨೦ ಇಂದ ಪಂಚಮ ಶನಿಯ ಆರಂಭ ಆಗುತ್ತಾ ಇರುವುದರಿಂದ ನೀವು ಗೊತ್ತಿಲ್ಲದೆ ಇರುವ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬೇರೆ ಕೆಲಸ ಸಿಗದೇ ಕಷ್ಟ ಪಡುವ ಸಾಧ್ಯತೆ ದಟ್ಟವಾಗಿದೆ ಚಿಕ್ಕದಾದರೂ ಕಷ್ಟವಾದರೂ ಇರುವ ಉದ್ಯೋಗ ಬಿಡಬೇಡಿ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191008175208″); document.getElementById(“div_6020191008175208”).appendChild(scpt);
Tags: Vittal Bhat
ShareTweetSendShare

Discussion about this post

Related News

Tulsi Vivah

Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ

raghavendra swamy aradhana mantralayam

Raghavendra Swamy Aradhana : ರಾಯರ 351ನೇ ಆರಾಧನಾ ಮಹೋತ್ಸವ : ಮಂತ್ರಾಲಯದಲ್ಲಿ ಸಂಭ್ರಮ

nagara-panchami-most-amazing-snake-naga-temples-of-india-story

Naga temple : ಭಾರತದ ಪ್ರಸಿದ್ಧ ನಾಗ ದೇವಾಲಯಗಳು : ನಾಗದೋಷ ಪರಿಹರಿಸುವ ಪುಣ್ಯ ಕ್ಷೇತ್ರ

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 27 july 2022

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 26 july 2022

Daily horoscope  : ದಿನ ಭವಿಷ್ಯ : ಇಂದಿನ ರಾಶಿ ಭವಿಷ್ಯ 24 ಜುಲೈ 2022

Rashi bhavishya : ದಿನ ಭವಿಷ್ಯ : ಯೋಜಿತ ಕೆಲಸದಲ್ಲಿ ಯಶಸ್ಸು ಸಾಧಿಸಲು ಸುದಿನ

weekly horoscope in kannada : ಈ ವಾರ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು

ಅಮಾವಾಸ್ಯೆ ದಿನ ಈ ವಸ್ತುಗಳನ್ನು ಖರೀದಿಸಬೇಡಿ : ಯಾವುದು ಆ ವಸ್ತುಗಳು

ಆಷಾಢ ಅಮಾವಾಸ್ಯೆ 2022  : ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆಯ ಮಹತ್ವ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್