ಹೊಂಬಾಳೆ ಫಿಲಂಸ್ ತಮ್ಮ 11ನೇ ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿದೆ. ‘ಕಾಂತಾರ’ ಚಿತ್ರಕ್ಕೆ ‘ಒಂದು ದಂತಕಥೆ’ ಎಂದು ಅಡಿಬರಹ ನೀಡಲಾಗಿದೆ.
ರಿಷಭ್ ಶೆಟ್ಟಿ ಚಿತ್ರದಲ್ಲಿ ಬರೆದು ನಿರ್ದೇಶನ ಮಾಡಲಿದ್ದು, ಅದರೊಂದಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿಲಿದ್ದಾರೆ. ಹೊಂಬಾಳೆ ಫಿಲಂ ಬ್ಯಾನರ್ ನಡಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಲಿದ್ದಾರೆ. ಆಗಸ್ಟ್ 27ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದಾರೆ.
ಕೊರೋನಾ ಕಾರಣದಿಂದ ಥಿಯೇಟರ್ ಗಳು ಬಾಗಿಲು ತೆರೆಯುತ್ತಿಲ್ಲ. ಇದರಿಂದ ಇಡೀ ಚಂದನವನ ಕಂಗಲಾಗಿ ಕೂತಿದೆ. ಈ ಆತಂಕದ ನಡುವೆ ವಿಜಯ್ ಕಿರಗಂದೂರು ಸಾಲು ಸಾಲು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿರುವುದು ಅಚ್ಚರಿ ಮೂಡಿಸಿದೆ.
Discussion about this post