ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಅಲೆ ಹೆಚ್ಚಾಗಲು ಸರ್ಕಾರ ಆಡಳಿತ ಹಾಗೂ ಜನ ಮೈ ಮರೆತಿದ್ದೇ ಕಾರಣ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಪಾಸಿಟಿವಿಟಿ ಆನ್ ಲಿಮಿಟೆಡ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಸಂಕಷ್ಟ ಸಂದರ್ಭದಲ್ಲಿ ಇಡೀ ದೇಶ ಒಟ್ಟಾಗಿ ಹೋರಾಟ ನಡೆಸಬೇಕು ಹೊರತು ಯಾರನ್ನೂ ದೂರಬಾರದು ಅಂದಿದ್ದಾರೆ.
ವೈದ್ಯರ ಸೂಚನೆಗಳನ್ನು ಮರೆತ ನಾವು ಮೊದಲ ಅಲೆ ಮುಗಿದ ಬಳಿಕ ಸೋಂಕಿನ ವಿರುದ್ಧದ ಮುಂಜಾಗ್ರತ ಕ್ರಮಗಳನ್ನು ಕೈ ಬಿಟ್ಟೆವು. ಒಂದು ವೇಳೆ ಮೊದಲ ಅಲೆ ಮುಗಿಯುತ್ತಿದ್ದಂತೆ ಸರ್ಕಾರ, ಆಡಳಿತ ಜನ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂದಿದ್ದಾರೆ.
ಮೋಹನ್ ಭಾಗವತ್ ಹೇಳಿದ ಮಾತುಗಳು ನೂರಕ್ಕೆ ನೂರು ಸತ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ತಜ್ಞರು ಕೊಟ್ಟ ಸಲಹೆಗಳನ್ನು ಅತ್ಯಂತ ಹೆಚ್ಚು ನಿರ್ಲಕ್ಷಿಸಿದ ಕೀರ್ತಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ರಾಜ್ಯದ ಚುನಾವಣೆ ಸಂದರ್ಭಗಳಲ್ಲಿ ಹೇಗೆ ಪಾಲ್ಗೊಂಡಿದ್ದರು ಅನ್ನುವುದನ್ನೂ ಜನ ನೋಡಿದ್ದಾರೆ.
Discussion about this post