ಬೆಂಗಳೂರು : ಸಂಚಾರಿ ವಿಜಯ್ ಸಾವಿನ ಬೆನ್ನಲ್ಲೇ ಹತ್ತು ಹಲವು ಸುದ್ದಿಗಳು ಹರಿದಾಡುತ್ತಿದೆ. ಆದರೆ ಅವೆಲ್ಲವೂ ಬರೀ ವ್ಯೂಗಳ ಬೆನ್ನು ಹತ್ತಿದ ಸುದ್ದಿ ಅನ್ನುವುದು ಸಾಬೀತಾಗಿದೆ. ಯೂಟ್ಯೂಬ್ ವಾಹಿನಿಯೊಂದಕ್ಕೆ ಅವರ ಗೆಳೆಯ ಬ್ರಿಜೇಶ್ ಸಂದರ್ಶನ ಕೊಟ್ಟಿದ್ದು ಅವತ್ತು ನಡೆದಿದ್ದು ಏನು ಎಂದು ವಿವರಿಸಿದ್ದಾರೆ.
ಇನ್ನು ಸಂಚಾರಿ ವಿಜಯ್ ಅವರ ಅಂತಿಮ ವಿಧಿವಿಧಾನಗಳು ಮುಕ್ತಾಯವಾಗುತ್ತಿದ್ದಂತೆ ಬೇರೆ ಬೇರೆ ಸುದ್ದಿಗಳ ಭರಾಟೆಯಲ್ಲಿ ಸಂಚಾರಿ ವಿಜಯ್ ಜೊತೆ ಬೈಕ್ ಓಡಿಸುತ್ತಿದ್ದ ನವೀನ್ ಹೇಗಿದ್ದಾರೆ ಅನ್ನುವುದನ್ನೇ ಜನ ಮರೆತಿದ್ದಾರೆ. ಈ ಬಗ್ಗೆಯೂ ಬ್ರಿಜೇಶ್ ಅವರು ಮಾತನಾಡಿದ್ದಾರೆ.
ಅಪಘಾತವಾದ ಸಂದರ್ಭದಲ್ಲಿ ವಿಜಯ್ ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ತಲೆಗೂ ಪೆಟ್ಟು ಬಿದ್ದಿತ್ತು. ನವೀನ್ ಅವರಿಗೂ ಗಾಯಗಳಾಗಿತ್ತು ಇಬ್ಬರೂ ನಡೆಯುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ವಿಧಿಯಾಟ ಅನ್ನುವಂತೆ ವಿಜಯ್ ಇಹಲೋಕದ ಯಾತ್ರೆ ಮುಗಿಸಿದರು.
ನವೀನ್ ಬೆನ್ನುಮೂಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ಜೊತೆಗೆ ಕಾಲಿನ ಭಾಗಕ್ಕೂ ಗಾಯಗಳಾಗಿದೆ. ಪ್ರಸ್ತುತ ನವೀನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನೊಂದೆರಡು ದಿನದಲ್ಲಿ ನವೀನ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಒಂದು ತಿಂಗಳ ವಿಶ್ರಾಂತಿಯ ಬಳಿಕ ಅವರು ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ ಎಂದು ಬ್ರಿಜೇಶ್ ಹೇಳಿದ್ದಾರೆ.
ಇನ್ನು ನವೀನ್ ಅವರಿಗೂ ಸುದೀಪ್ ಅವರೇ ಅಪೋಲೋ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿಕೊಟ್ಚಿದ್ದರು ಅನ್ನುವುದನ್ನು ಬ್ರಿಜೇಶ್ ಅವರು ಬಹಿರಂಗಪಡಿಸಿದ್ದಾರೆ.
Discussion about this post