ಇತ್ತೀಚೆಗೆ ನಮ್ಮನಗಲಿದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯಕ್ರಮ ಇಂದು ನಡೆಯಿತು.

ಪಂಚನಹಳ್ಳಿ ಬಳಿಯ ತೋಟಕ್ಕೆ ತೆರಳಿದ ವಿಜಯ್ ಸಹೋದರರು ಹಾಗೂ ಕುಟುಂಬಸ್ಥರು ಹಾಲು ತುಪ್ಪ ಬಿಟ್ಟಿದ್ದಾರೆ. ಈ ವೇಳೆ ರಘು ಅವರ ಬಾಲ್ಯ ಸ್ನೇಹಿತ ಹಾಗೂ ತೋಟದ ಮಾಲೀಕ ರಘು ಅವರ ಉಪಸ್ಥಿತರಿದ್ದರು.

ರಸ್ತೆ ಅಪಘಾತಕ್ಕೆ ಒಳಗಾಗಿದ್ದ ನಟ ವಿಜಯ್ ಎರಡು ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಇದಾದ ಬಳಿಕ ಕುಟುಂಬದ ಆಸೆಯಂತೆ ಅಂಗಾಂಗಳನ್ನು ದಾನ ಮಾಡಲಾಗಿತ್ತು. ಈ ಮೂಲಕ ಸಂಚಾರಿ ವಿಜಯ್ ಹಲವರ ಬಾಳಿನಲ್ಲಿ ಬೆಳಕಾಗಿದ್ದಾರೆ.
Discussion about this post