ಬಹುತೇಕ ಹೊಸ ಪ್ರತಿಭೆಗಳೇ ಅಭಿನಯಿಸಿರುವ ‘ಸವರ್ಣ ದೀರ್ಘ ಸಂಧಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ವಿಭಿನ್ನ ಟೈಟಲ್ ಮೂಲಕ ಸ್ಯಾಂಡಲ್ವುಡ್ ಸಿನಿಪ್ರಿಯರಿಗೆ ನಗುವಿನ ಕಚಗುಳಿಯಿಡಲು ಹೊಸಬರ ತಂಡ ರೆಡಿಯಾಗಿದೆ.
ಕೋಸ್ಟಲ್ ವುಡ್ಲ್ಲಿ ‘ಚಾಲಿ ಪೋಲಿಲು’ ಎಂಬ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಸವರ್ಣ ದೀರ್ಘ ಸಂಧಿ’ ಹಾಸ್ಯಭರಿತ ಗ್ಯಾಂಗ್ಸ್ಟರ್ ಕಥೆ ಹೊಂದಿರುವ ಕಾಮಿಡಿ ಸಿನಿಮಾವಾಗಿದ್ದು, ಸಿನಿರಸಿಕರಿಗೆ ಹಾಸ್ಯದ ರಸದೌತಣ ಸಿಗುವುದರಲ್ಲಿ ಡೌಟೇ ಇಲ್ಲ ಅನ್ನುತ್ತಿದೆ ಚಿತ್ರತಂಡ.
ಇನ್ನು ಈ ಚಿತ್ರದ ನಾಯಕಿಯಾಗಿ ಸ್ಯಾಂಡಲ್ವುಡ್ ನಲ್ಲಿ ಪೋಷಕ ಕಲಾವಿದರಾಗಿ ಗುರುತಿಸಲ್ಪಟ್ಟಿರುವ ರವಿ ಭಟ್ (ವಿನಯ್ ಪ್ರಸಾದ್ ಸಹೋದರ) ಅವರ ಪುತ್ರಿ ಕೃಷ್ಣಾ ಅಭಿನಯಿಸಿದ್ದಾರೆ. ಈಕೆಯ ಮೊದಲ ಹೆಸರು ಭಾವನಾ ಭಟ್. ಆದರೀಗ ಈಗ ಕೃಷ್ಣಾ ಆಗಿ ಬಣ್ಣದಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಇನ್ನುಳಿದಂತೆ ಚಿತ್ರದಲ್ಲಿ ಪದ್ಮಜ ರಾವ್, ಕೃಷ್ಣಾ ಅಡಿಗ, ನಿರಂಜನ್ ದೇಶಪಾಂಡೆ ಮತ್ತು ರವಿ ಮಂಡ್ಯ ಅಭಿನಯಿಸಿದ್ದಾರೆ.
ವೀರು ಟಾಕೀಸ್ ಮತ್ತು ಲಿಲಾಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗಿದ್ದು, ಚಿತ್ರಕ್ಕೆ ‘ಮುಂಗಾರು ಮಳೆ’ ಖ್ಯಾತಿಯ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಜೊತೆಗೆ ಬಂಡವಾಳ ಕೂಡಾ ಹೂಡಿದ್ದಾರೆ.
Discussion about this post