crossorigin="anonymous"> Savitha kundar : ಬಿಟ್ಹೋಗ್ಬೇಡಿ…. ಸರ್ಕಾರಿ ವೈದ್ಯೆ ವರ್ಗಾವಣೆಗೆ ಕಣ್ಣೀರಿಟ್ಟ ಗ್ರಾಮಸ್ಥರು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Savitha kundar : ಬಿಟ್ಹೋಗ್ಬೇಡಿ…. ಸರ್ಕಾರಿ ವೈದ್ಯೆ ವರ್ಗಾವಣೆಗೆ ಕಣ್ಣೀರಿಟ್ಟ ಗ್ರಾಮಸ್ಥರು

Radhakrishna Anegundi by Radhakrishna Anegundi
08-08-22, 12 : 57 pm
in ಟ್ರೆಂಡಿಂಗ್
Savitha kundar udupi people-gets-emotional-to-avarse-village
Share on FacebookShare on TwitterWhatsAppTelegram

ಸರ್ಕಾರಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿದ್ರೆ ಜನ ಅದೆಷ್ಟು ಪ್ರೀತಿಸುತ್ತಾರೆ ಅನ್ನುವುದಕ್ಕೆ Savitha kundar ಉದಾಹರಣೆ

ಉಡುಪಿ : ಸರ್ಕಾರಿ ಅಧಿಕಾರಿಗಳು ಅಂದ್ರೆ ಜನರಲ್ಲಿ ಅಸಡ್ಡೆ ಅಸಹ್ಯ ಮೂಡಿದೆ. ಅವರ ಲಂಚದ ದಾಹಕ್ಕೆ ಜನ ಸುಸ್ತಾಗಿ ಹೋಗಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಜನ ಮೂಗು ಮುರಿಯುತ್ತಾರೆ. ಅಲ್ಲಿನ ಅವ್ಯವಸ್ಥೆಗಳೇ ಜನರಲ್ಲಿ ಹೀಗೆ ಭಾವನೆ ಮೂಡಿಸುವಂತೆ ಮಾಡಿದೆ. ಆದರೆ ಸರ್ಕಾರಿ ಆಸ್ಪತ್ರೆಗಳು ಸಾಕಷ್ಟು ಸುಧಾರಣೆ ಕಂಡಿದೆ. ( Savitha kundar)

ಈ ನಡುವೆ ಗ್ರಾಮದ ವೈದ್ಯಾಧಿಕಾರಿಯೊಬ್ಬರು ವರ್ಗಾವಣೆಯಾಗಿ ಹೋಗುತ್ತಿದ್ದಾರೆ ಅನ್ನುವ ಸುದ್ದಿ ಕೇಳಿ ಇಡೀ ಗ್ರಾಮವೇ ಕಣ್ಣೀರು ಹಾಕಿದ ಘಟನೆ ಬ್ರಹ್ಮಾವರ ತಾಲೂಕಿನ ಗ್ರಾಮೀಣ ಪ್ರದೇಶ ಆವರ್ಸೆ ( avarse) ಗ್ರಾಮದಲ್ಲಿ ನಡೆದಿದೆ. ಯುವ ವೈದ್ಯಯೊಬ್ಬಳು ಇಲ್ಲಿ ಇರೋದಿಲ್ಲ ಅನ್ನು ಸುದ್ದಿ ಕೇಳಿ ಹಿರಿಯ ಜೀವಗಳು ಸಿಕ್ಕಾಪಟ್ಟೆ ನೊಂದುಕೊಂಡರೆ, ಕೆಲವರು ವೈದ್ಯರ ಕಾಲಿಗೆ ಎರಗಿ ನಮ್ಮ ಬಿಟ್ಟು ಹೋಗಬೇಡಿ ಅಂದಿದ್ದಾರೆ.

ಇದನ್ನು ಓದಿ : Umesh katti : ಶೂ ಧರಿಸಿ ಗಜಪಡೆಗೆ ಪೂಜೆ ಸಲ್ಲಿಸಿದ ಉಮೇಶ್ ಕತ್ತಿ

ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಸವಿತಾ ಕುಂದರ್ ( avarse savitha) ಕಳೆದ 12 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.MBBS ಪದವಿ ಪೂರೈಸಿದ ಬಳಿಕ ಗ್ರಾಮಾಂತರ ಪ್ರದೇಶ ಆವರ್ಸೆಯಲ್ಲಿ ಸೇವೆ ಆರಂಭಿಸಿದ್ದ ಇವರು ಆವರ್ಸೆ, ಹಿಲಿಯಾಣ, ನಂಚಾರು, ವಂಡಾರು ಹೀಗೆ ಗ್ರಾಮಾಂತರದ ಜನರ ಪಾಲಿಗೆ ದೇವರಾಗಿ ಹೋಗಿದ್ದರು.

ಆಸ್ಪತ್ರೆಗೆ ಬಂದವರ ಪಾಲಿಗೆ ಸವಿತಾ ವೈದ್ಯೆಯಾಗಿರಲಿಲ್ಲ, ಹಲವರಿಗೆ ಮಗಳಾಗಿದ್ದಳು, ಮತ್ತೆ ಕೆಲವರಿಗೆ ಅಕ್ಕ ಆಗಿದ್ದರು, ಮತ್ತೊಂದಿಷ್ಟು ಮಂದಿಗೆ ತಂಗಿಯಾಗಿದ್ದರು, ಅಷ್ಟೇ ಯಾಕೆ ಕೆಲವರ ಪಾಲಿಗೆ ಸವಿತಾ ಕುಂದರ್ ಮಾತೃ ವಾತ್ಸಾಲ್ಯ ಹಂಚಿದ್ದು ಕೂಡಾ ಇದೆ.

ಬ್ರಹ್ಮಾವರ ತಾಲೂಕಿನ ಸಾಸ್ತಾನದವರಾಗಿರುವ ಡಾ.ಸವಿತಾ ಆವರ್ಸೆಯ ಬಳಿಕ ಇದೀಗ ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.

avrase

12 ವರ್ಷಗಳಿಂದ ಆವರ್ಸೆಯಲ್ಲಿ ಸೇವೆ ಸಲ್ಲಿಸಿರುವ ಡಾ.ಸವಿತಾ ರಾತ್ರಿ ಹಗಲೆನ್ನದೆ ಸೇವೆ ನೀಡುತ್ತಿದ್ದವರು. ಪ್ರತಿದಿನ 150ಕ್ಕೂ ಮಿಕ್ಕಿ ರೋಗಿಗಳ ಪರೀಕ್ಷೆ ನಡೆಸುತ್ತಿದ್ದರು. ಇಷ್ಟೆಲ್ಲಾ ಒತ್ತಡದ ನಡುವೆ ಆರೋಗ್ಯ ಜಾಗೃತಿಗಾಗಿ ಹಳ್ಳಿ ಹಳ್ಳಿಯ ಮನೆ ಮನೆಗು ಭೇಟಿ ಕೊಡುತ್ತಿದ್ದ ಸವಿತಾ ಇಡೀ ಗ್ರಾಮದ ಮಗಳಾಗಿದ್ದರು.

ಇನ್ನು ಗ್ರಾಮಸ್ಥರ ಪ್ರೀತಿಯ ಬಗ್ಗೆ ಮಾತನಾಡಿರುವ ಸವಿತಾ ತೀರಾ ಗ್ರಾಮಾಂತರ ಪ್ರದೇಶದಿಂದ ಬಂದವಳು ನಾನು, ಗ್ರಾಮದದಲ್ಲೇ ಸೇವೆ ಸಲ್ಲಿಸುವ ಅವಕಾಶ ಸಿಕ್ತು. ಜನರ ಪ್ರೀತಿಗೆ ತಲೆ ಬಾಗಿದ್ದೇನೆ. ಸರಕಾರದ ಆದೇಶ ಪಾಲಿಸುವುದು ನನ್ನ ಕರ್ತವ್ಯ. ಹಾಗಿದ್ದರೂ ಆವರ್ಸೆ ಆರೋಗ್ಯ ಕೇಂದ್ರಕ್ಕೆ ವಾರದಲ್ಲೊಂದು ದಿನ ಹೊರರೋಗಿಗಳ ತಪಾಸಣೆಗೆ ಬರುವ ಭರವಸೆ ನೀಡಿದ್ದೇನೆ ಅಂದಿದ್ದಾರೆ.

ಒಟ್ಟಿನಲ್ಲಿ ಉತ್ತಮ ಸೇವೆ ನೀಡಿದರೆ ಜನರು ವೈದ್ಯರನ್ನು ದೇವರಂತೆ ಪೂಜಿಸುತ್ತಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ. ಹಲವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಿಗೆ ದೊರಕದ ವೈದ್ಯರಿದ್ದಾರೆ. ಅವರೆಲ್ಲರಿಗೂ ಸವಿತಾ ಕುಂದರ್ ಮಾದರಿಯಾಗಲಿ ಅನ್ನುವುದೇ ಎಲ್ಲರ ಹಾರೈಕೆ.

Tags: FEATURED
ShareTweetSendShare

Discussion about this post

Related News

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ಮಗಳ ಒಂಟಿ ಕೈಗೇ ತಂದೆಯಿಂದ ಅಂತ್ಯಸಂಸ್ಕಾರ : ವಯನಾಡಿನ ಕಣ್ಣೀರ ಕಥೆ

ಅಯೋಧ್ಯೆ ಮಂದಿರ ಉದ್ಘಾಟನೆಯಂದೆ ಹೆರಿಗೆ ಮಾಡಿಸಿ : ವೈದ್ಯರಿಗೆ ದುಂಬಾಲು

ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್