ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಿಗೆ ಕೊನೆಗೂ ಬೇಲ್ ಸಿಕ್ಕಿದೆ. 70ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೊಡುವ ಮುನ್ನ ನೀತಿ ಪಾಠ ಬೋಧಿಸಿದ ನ್ಯಾಯಾಧೀಶರು,ಇದೇ ಕೊನೆ. ಇನ್ನು ಮುಂದೆ ಪುಂಡಾಟ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀರೋ ಆಗಿರುವ ನೀವು ಜನರಿಗೆ ರೋಲ್ ಮಾಡೆಲ್ ಆಗಿರಬೇಕು. ಈ ರೀತಿ ಮಾಡಿಕೊಳ್ಳಬಾರದು ಎಂದು ಬುದ್ಧಿವಾದ ಹೇಳಿದರು.
ಇದೇ ವೇಳೆ ಜಾಮೀನು ಮಂಜೂರು ಮಾಡಿದ ಸೆಷನ್ಸ್ ಕೋರ್ಟ್ ಕೋರ್ಟ್ ನ್ಯಾಯಾಧೀಶ ರಾಮಲೀಂಗೇಗೌಡ ಅವರು ,1 ಲಕ್ಷ ರೂ. ಬಾಂಡ್ ಹಾಗೂ ಎರಡು ಶ್ಯೂರಿಟಿ, ಪ್ರಭಾವ ಬೀರಿ ಯಾವುದೇ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ತನಿಖೆಗೆ ಸಹಕರಿಸಿಬೇಕು ಎಂದು ಷರತ್ತು ವಿಧಿಸಿದರು.
ಕರಿ ಚಿರತೆ ವಿಜಿ ಮೇಲೆ ಮೇಲೆ ಕಿಡ್ನಾಪ್, ಹಲ್ಲೆ, ಕೊಲೆ ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365 (ಕಿಡ್ನಾಪ್), 342 (ಅಕ್ರಮ ಬಂಧನ), 325 (ಹಲ್ಲೆ), 506 (ಕೊಲೆ ಬೆದರಿಕೆ) ಪ್ರಕರಣ ದಾಖಲಾಗಿದೆ. ಆರೋಪಗಳು ಸಾಬೀತಾದಲ್ಲಿ ಎರಡು ವರ್ಷ ಮೇಲ್ಪಟ್ಟು ಶಿಕ್ಷೆ ಗ್ಯಾರಂಟಿ.
ನ್ಯಾಯಾಧೀಶರು ರೋಲ್ ಮಾಡೆಲ್ ಆಗಿರಬೇಕು ಅಂದರು ಸರಿ. ಆದರೆ ಮೊದಲ ಹೆಂಡತಿ ಇರುವಾಗಲೇ ಎರಡನೇ ಮದುವೆ ಮಾಡಿಕೊಂಡ ವಿಜಿ ರೋಲ್ ಮಾಡೆಲ್ ಆಗುವ ನೈತಿಕತೆ ಎಲ್ಲಿ ಹೊಂದಿದ್ದಾರೆ ಅನ್ನುವುದೇ ಪ್ರಶ್ನೆ.
Discussion about this post