ಮಾಧ್ಯಮಗಳು ಎಲ್ಲವನ್ನೂ ಮರೆತು ರೋಚಕತೆಯ ಬೆನ್ನಿಗೆ ಬಿದ್ದಿವೆ. ಇದನ್ನು ಮಾಧ್ಯಮಗಳು ತಿದ್ದಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕಾದಲ್ಲಿ ನಡೆದ ಬ್ಲೂಮ್ ಬರ್ಗ್ ಬಿಸಿನೆಸ್ ಶೃಂಗದಲ್ಲಿ ಸಂದರ್ಶನ ನೀಡಿರುವ ಅವರು ಹಲವಾರು ವಿಷಯಗಳ ಕುರಿತಂತೆ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣದ ಬೆಳವಣಿಗೆ, ಅಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳು, ಅವುಗಳ ಜೊತೆಗೆ ಮುಖ್ಯವಾಹಿನಿಯ ಪೈಪೋಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ ಕಲೆ ವರ್ಷಗಳ ಹಿಂದೆ ಭಾರತದಲ್ಲಿ ವಿಮಾನವೊಂದರ ಅಪಹರಣವಾಗಿತ್ತು. ನೂರಾರು ಪ್ರಯಾಣಿಕರಿದ್ದ ವಿಮಾನವನ್ನು ಉಗ್ರಗಾಮಿಗಳು ಕಂದಹಾರ್ ನಲ್ಲಿ ಲ್ಯಾಂಡ್ ಮಾಡಿಸಿದ್ದರು. ಈ ವೇಳೆ ಟಿವಿ ವಾಹಿನಿಗಳು ರೋಚಕವಾಗಿ ವರದಿ ಮಾಡಿತ್ತು. ಅದನ್ನು ನೋಡುತ್ತಿದ್ದ ಉಗ್ರರು ನಾವು ಏನೇ ಬೇಡಿಕೆ ಇಟ್ಟರೂ ಭಾರತ ಅದನ್ನು ಈಡೇರಿಸುವ ಒತ್ತಡದಲ್ಲಿದೆ ಅನ್ನುವುದನ್ನು ಅರ್ಥ ಮಾಡಿಕೊಂಡಿದ್ದರು.
ನಂತರ ತಪ್ಪುಗಳ ಅರಿತುಕೊಂಡ ಟಿವಿ ವಾಹಿನಿಗಳು ತಮ್ಮಲ್ಲೇ ಸಭೆ ನಡೆಸಿ ಮುಂದೆ ಹೀಗೆ ಮಾಡಬಾರದು ಎಂದು ನಿರ್ಧರಿಸಿತು. ಆಗ ನಾನು ಖುಷಿ ಪಟ್ಟಿದೆ. ಆದರೆ ಈಗ ಅವೆಲ್ಲವನ್ನೂ ಮರೆತಿರುವ ಮಾಧ್ಯಮಗಳು ಮತ್ತೆ ರೋಚಕತೆಯ ಹಿಂದೆ ಬಿದ್ದಿವೆ.

ಇನ್ನು ಸಾಮಾಜಿಕ ಜಾಲ ತಾಣದ ಬಗ್ಗೆ ಹೇಳುವುದಾದರೆ ಅದು ಜನರಿಗೆ ಸಬಲೀಕರಣದ ಅಸ್ತ್ರ. ಅಲ್ಲಿ ನೆಗೆಟಿವ್ ಸಂಗತಿಗಳು ಹೆಚ್ಚುತ್ತಿರುವುದು ದುರಂತ. ಸಾಮಾಜಿಕ ಜಾಲತಾಣಗಳನ್ನು ಪ್ರತಿಯೊಬ್ಬರೂ ರಚನಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಫೇಕ್ ನ್ಯೂಸ್ ಗಳನ್ನು ಪತ್ತೆ ಹಚ್ಚಿ ಸತ್ಯ ಹೇಳುವ ಕೆಲಸ ಮಾಡಿದರೆ ಉತ್ತಮ.
ಸುಮ್ಮನೆ ಬಂದ ಎಲ್ಲವನ್ನೂ ಪಾರ್ವಡ್ ಮಾಡೋ ಬದಲು ಸರಿ ಯಾವುದು ತಪ್ಪು ಯಾವುದನ್ನು ನೋಡಿ ಬಳಸಿದರೆ ಉತ್ತಮ. ನಾನಂತು ಸೋಷಿಯಲ್ ಮೀಡಿಯಾ ಪರ ಇದ್ದೇನೆ. ನಾನು ಅವುಗಳನ್ನು ತುಂಬಾ ಬಳಸುತ್ತೇನೆ. ಅವು ಸಮಾಜದ ತಳಮಟ್ಟದ ಸಮಸ್ಯೆಗಳನ್ನು ನಮಗೆ ತಲುಪಿಸುತ್ತವೆ. ಹೀಗಾಗಿ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
Discussion about this post