ಬೆಂಗಳೂರು : ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಬಗ್ಗೆ ಅಸಮಾಧಾನ ಟೀಕೆ ವ್ಯಕ್ತವಾಗುತ್ತಿರುವ ನಡುವೆ ಒಂದಿಷ್ಟು ಒಳ್ಳೆಯ ಅಂಶಗಳು ಕೂಡಾ ಬಜೆಟ್ ನಲ್ಲಿವೆ. ಬಜೆಟ್ ಪುಸ್ತಕದಲ್ಲಿ ಅದು ಒಳ್ಳೆಯ ಯೋಜನೆಯಾದರೂ ಜಾರಿಗೆ ಬಂದರೆ ಮಾತ್ರ ಜನರಿಗೆ ಅನುಕೂಲವಾಗಲಿದೆ.
ಸ್ವಿಗ್ಗಿ…ಉಬರ್.. ಓಲಾ ಹೀಗೆ ಅನೇಕ APP ಆಧಾರಿತ ಸಂಸ್ಥೆಗಳಲ್ಲಿ ದುಡಿಯುವವರನ್ನು ಸಾಮಾಜಿಕ ಭದ್ರತೆ ಯೋಜನೆಗಳ ವ್ಯಾಪ್ತಿಗೆ ತರಲು ಬಜೆಟ್ ನಲ್ಲಿ ನಿರ್ಧರಿಸಲಾಗಿದೆ. ಜೊತೆಗೆ ಕಟ್ಟಡ ಕೆಲಸಗಾರರು ಸೇರಿದಂತೆ ಅನೇಕ ಅಸಂಘಟಿತ ವರ್ಗದವರನ್ನು ಕೂಡಾ ಸಾಮಾಜಿಕ ಭದ್ರತೆ ವ್ಯಾಪ್ತಿಗೆ ಕರೆ ತರಲು ನಿರ್ಧರಿಸಲಾಗಿದೆ.
APP ಆಧಾರಿತ ಸಂಸ್ಥೆಗಳಲ್ಲಿ ದುಡಿಯುವವರು ಸಂಬಳ ಪಡೆಯೋದಿಲ್ಲ, ಬದಲಾಗಿ ಕಮಿಷನ್ ನಲ್ಲಿ ಜೀವನ ನಡೆಸುತ್ತಾರೆ. ಇವರಿಗೆ ಭವಿಷ್ಯ ನಿಧಿ, ಸಮೂಹ ವಿಮೆ, ಪಿಂಚಣಿ ಅನ್ನುವುದು ಕನಸಿನ ಮಾತು ಹಾಗೂ ಅಸಂಘಟಿತ ವಲಯದ ಕಾರ್ಮಿಕರದ್ದು ಕೂಡಾ ಇದೇ ಕಥೆ.
ಹೀಗಾಗಿ ಅವರನ್ನು ಸಾಮಾಜಿಕ ಭದ್ರತಾ ಯೋಜನೆಗಳ ಒಳಗೆ ತಂದು ಆರೋಗ್ಯ, ಸುಲಭ ಸಾಲ ಹೀಗೆ ಅನೇಕ ಸೌಲಭ್ಯಗಳು ದೊರಕುವಂತೆ ಮಾಡಲು ನಿರ್ಧರಿಸಲಾಗಿದೆ.
ಈ ಸಲುವಾಗಿ ಪ್ರತ್ಯೇಕ ವೆಬ್ ಸೈಟ್ ಒಂದು ಪ್ರಾರಂಭವಾಗಲಿದ್ದು, ಯೋಜನೆ ಯಶಸ್ವಿಯಾಗಿ ಜಾರಿಯಾದರೆ ಇದೊಂದು ಉತ್ತಮ ಯೋಜನೆ ಅನ್ನುವುದರಲ್ಲಿ ಅನುಮಾನವಿಲ್ಲ.
Discussion about this post