ಬೆಂಗಳೂರು : ಆಟೋ ಚಾಲಕರೊಬ್ಬರ ಶವ ಮೋರಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಶ್ರೀರಾಂಪುರ ಠಾಣಾ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರದ ನಿವಾಸಿ ವಿನೋದ್ಕುಮಾರ್ (38) ಮೃತಪಟ್ಟಿರುವ ಆಟೋ ಚಾಲಕನಾಗಿದ್ದು, ದಯಾನಂದನಗರದಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು. ಇತ್ತೀಚೆಗೆ ಈ ಮನೆಯನ್ನು ಬಾಡಿಗೆಗೆ ಕೊಟ್ಟು ವಿದ್ಯಾರಣ್ಯಪುರಕ್ಕೆ ಬಂದು ನೆಲೆಸಿದ್ದರು. ಆಟೋ ಚಾಲಕ ವೃತ್ತಿ ಮಾಡುತ್ತಿದ್ದ ವಿನೋದ್ಕುಮಾರ್ ಹೆಚ್ಚಾಗಿ ದಯಾನಂದ ನಗರದಲ್ಲೇ ಬಾಡಿಗೆ ಮಾಡುತ್ತಿದ್ದರು. ಜೊತೆಗೆ ಮನೆಗೂ ಹೆಚ್ಚಾಗಿ ಬರುತ್ತಿರಲಿಲ್ಲ. ಬಹುತೇಕ ಆಟೋದಲ್ಲಿ ಮಲಗಿಕೊಳ್ಳುತ್ತಿದ್ದರು.
ಇಂದು ಮುಂಜಾನೆ ಪ್ರಕಾಶ್ನಗರದ ಮೋರಿಯಲ್ಲಿ ವಿನೋದ್ಕುಮಾರ್ ಶವ ನೋಡಿದ ಸಾರ್ವಜನಿಕರು ಶ್ರೀರಾಂಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿನೋದ್ ಕುಮಾರ್ ಅವರಿಗೆ ಮೂರ್ಛೆ ರೋಗ ಬರುತ್ತಿತ್ತು. ಜೊತೆಗೆ ಕುಡಿತದ ಚಟವಿತ್ತು ಎಂದು ಗೊತ್ತಾಗಿದೆ. ಬುಧವಾರ ಬೆಳಗ್ಗೆ ಶವ ಸಿಕ್ಕ ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ.
Discussion about this post