ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದೆ. ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ನೆನಪಿಸಿಕೊಂಡರೆ ಗಾಬರಿಯಾಗುತ್ತದೆ.
ಈ ನಡುವೆ ಕೊರೋನಾ ವಿಚಾರದಲ್ಲಿ ಉಡಾಫೆ ತೋರುವ ಮಂದಿಯೂ ಕಡಿಮೆ ಇಲ್ಲ. ಬಹುತೇಕರು ಕೊರೋನಾ ಇಲ್ಲ ಎಂದು ವಾದ ಮಾಡುತ್ತಿದ್ದಾರೆ. ಇನ್ನು ಕೆಲವರು ಇವೆಲ್ಲವೂ ಸರ್ಕಾರದ ಸರ್ಕಸ್, ಕಾಸು ಮಾಡುವ ದಂಧೆ ಎಂದು ಟೀಕಿಸುತ್ತಿದ್ದಾರೆ. ಆದರೆ ಕೊರೋನಾ ಸೋಂಕಿಗೆ ತುತ್ತಾದ ಮಂದಿ ದಯವಿಟ್ಟು ನಿರ್ಲಕ್ಷ್ಯ ಮಾಡಬೇಡಿ ಎಂದು ಕೈ ಮುಗಿದು ಪ್ರಾರ್ಥಿಸುತ್ತಿದ್ದಾರೆ. ಕೊರೋನಾ ಸೋಂಕು ಬಂದ್ರೆ ಅದು ಯಮಯಾತನೆ. ಉಸಿರಾಡಲು ಕಷ್ಟಪಡಬೇಕಾದ ಪರಿಸ್ಥಿತಿ ಅದ್ಯಾವ ಶತ್ರುವಿಗೂ ಬೇಡ ಎಂದು ಮನವಿ ಮಾಡುತ್ತಿದ್ದಾರೆ.
ಇನ್ನು ನಿಮಗೆ ಸಂಶಯ ಇತ್ತು ಅನ್ನುವುದಾದ್ರೆ ನಟಿ ಶ್ವೇತಾ ಚೆಂಗಪ್ಪ ಅವರು 21 ದಿನಗಳ ಪಟ್ಟ ಪಾಡನ್ನು ಒಂದ್ಸಲ ಕೇಳಿಸಿಕೊಳ್ಳಿ. ಪುಟ್ಟ ಮಗುವೊಂದರ ತಾಯಿಯಾಗಿರುವ ಶ್ವೇತಾ ಚಂಗಪ್ಪ, ಕೊರೋನಾ ಸೋಂಕಿಗೆ ತುತ್ತಾದ ತಕ್ಷಣ ಗಾಬರಿಯಾಗಿದ್ದರು. ಆದರೆ ವೈದ್ಯರು ಅವರಲ್ಲಿ ಧೈರ್ಯ ತುಂಬಿದರು. ಆದರೆ ಪುಟ್ಟ ಮಗುವೊಂದರ ತಾಯಿಯಾಗಿದ್ದ ಶ್ವೇತಾ ಅವರಿಗೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಇತ್ತು. ಕೊರೋನಾ ಪಾಸಿಟಿವ್ ಆಗಿ ಮಗುವಿನ ಲಾಲನೆ ಪಾಲನೆ ಮಾಡಬೇಕಾಗಿತ್ತು. ಮನೆಯಲ್ಲಿ ಮನೆಯಲ್ಲಿ ಇದದ್ದು ಗಂಡ ಮಗು ಹಾಗೂ ಶ್ವೇತಾ ಅವರ ತಾಯಿ. ಶ್ವೇತಾ ಅವರ ತಾಯಿಯೂ ಪಾಸಿಟಿವ್ ಆಗಿದ್ದ ಕಾರಣ ಸಮಸ್ಯೆ ದೊಡ್ಡದಾಗಿತ್ತು. ಹಾಗಿದ್ದರೂ ಶ್ವೇತಾ ಅವರು ಇದೀಗ ಕೊರೋನಾ ಗೆದ್ದು ಬಂದಿದ್ದಾರೆ. ಅವರು ಕೊರೋನಾ ಗೆದ್ದ ಪರಿ, ಬಹುತೇಕರಿಗೆ ದಾರಿದೀಪವಾಗುವುದರಲ್ಲಿ ಸಂಶಯವಿಲ್ಲ.
Discussion about this post