ಬೆಂಗಳೂರು : ಈಜು ಕಲಿಸುತ್ತಿದ್ದ ತರಬೇತುದಾರನೊಬ್ಬ ತನ್ನ ಶಿಷ್ಯನ ಮನೆಗೆ ಕನ್ನ ಹಾಕಿದ ಘಟನೆ ಬೆಂಗಳೂರಿ ಕೆಪಿ ಆಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ರಸ್ತೆಯ ರೇಣುಕಾ ಪ್ರಸಾದ್ ಬಂಧಿತ ವ್ಯಕ್ತಿಯಾಗಿದ್ದು, ಆರೋಪಿಯಿಂದ 20 ಲಕ್ಷ ಮೊಲ್ಯದ 506 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಕೆಪಿ ಆಗ್ರಹಾರದಲ್ಲಿ ನೆಲೆಸಿದ್ದ ರೇಣುಕಾ ಪ್ರಸಾದ್, ವಿಜಯನಗರದ ಈಜುಕೊಳದಲ್ಲಿ 3 ವರ್ಷಗಳಿಂದ ತರಬೇತುದಾರನಾಗಿದ್ದ.
ಈ ಪೈಕಿ ಈಜು ಕಲಿಯಲು ಬರುತ್ತಿದ್ದ ಸಿರಿಗಂಧ ಅನ್ನುವ ಹುಡುಗನೊಂದಿಗೆ ಆತ್ಮೀಯನಾಗಿದ್ದ ರೇಣುಕಾ ಪ್ರಸಾದ್, ಶಿಷ್ಯನ ಮನೆಗೆ ಹೋಗಿ ಬರುವುದನ್ನು ಮಾಡುತ್ತಿದ್ದ.
ಇದೇ ಫೆ 25 ರಂದು ಸಿರಿಗಂಧನ ಮನೆಗೆ ರೇಣುಕಾ ಪ್ರಸಾದ್ ಹೋಗಿ ಬಂದಿದ್ದ. ಅದೇ ದಿನ ಅವರ ಮನೆಯಲ್ಲಿ ಮೊಬೈಲ್ ಕಳ್ಳತನವಾಗಿತ್ತು. ಆ ದಿನ ರೇಣುಕಾ ಪ್ರಸಾದ್ ಬಿಟ್ಟರೆ ಮತ್ಯಾರು ಮನೆಗೆ ಬಂದಿರಲಿಲ್ಲ, ಹೀಗಾಗಿ ಆತನ ಮೇಲೆ ಸಂಶಯಗೊಂಡ ಮನೆ ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಕರೆ ತಂದು ವಿಚಾರಣೆ ನಡೆಸಿದರೆ ಹೊರ ಬಿದ್ದಿದ್ದು 2 ವರ್ಷಗಳ ಹಿಂದೆ ಅವರ ಮನೆಯಲ್ಲಿ ಚಿನ್ನ ಕದ್ದ ವಿಚಾರ.
2 ವರ್ಷಗಳ ಹಿಂದೆ ಸಿರಿಗಂಧ ಕುಟುಂಬ ತಮಿಳುನಾಡು ಪ್ರವಾಸ ಹೋಗಿತ್ತು, ಮನೆಗೆ ಬಂದು ನೋಡುವ ವೇಳೆ ಚಿನ್ನಾಭರಣವಿರಲಿಲ್ಲ. ಪ್ರವಾಸದ ವೇಳೆ ಎಲ್ಲೋ ಕಳೆದು ಹೋಗಿರಬೇಕು ಎಂದು ಅವರು ಕೂಡಾ ಸುಮ್ಮನಾಗಿದ್ದಾರೆ.
ಆದರೆ ಇದೀಗ ಮೊಬೈಲ್ ಪ್ರಕರಣದ ಕಾರಣದಿಂದ ಚಿನ್ನಾಭರಣವನ್ನು 2 ವರ್ಷಗಳ ನಂತರ ಪಡೆಯುವಲ್ಲಿ ಕುಟುಂಬ ಯಶಸ್ವಿಯಾಗಿದೆ.
Discussion about this post