crossorigin="anonymous"> Talakala swamiji : ತಲಕಳದ ಶ್ರೀ ಕೃಷ್ಣ ದೇವಿ ಪ್ರಸಾದ ತೀರ್ಥ ಸ್ವಾಮೀಜಿ ಆತ್ಮಹತ್ಯೆ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Talakala swamiji : ತಲಕಳದ ಶ್ರೀ ಕೃಷ್ಣ ದೇವಿ ಪ್ರಸಾದ ತೀರ್ಥ ಸ್ವಾಮೀಜಿ ಆತ್ಮಹತ್ಯೆ

Radhakrishna Anegundi by Radhakrishna Anegundi
22-07-22, 7 : 55 pm
in ದಕ್ಷಿಣ ಕನ್ನಡ
Talakala swamiji mangaluru sri-krishna-deviprasad-teertha-swamiji
Share on FacebookShare on TwitterWhatsAppTelegram

ಧರ್ಮ ಚಾವಡಿ ಪ್ರದೇಶದಲ್ಲಿ ಕೋಟಿಗಟ್ಟಲೆ ಬೆಲೆಯ ಆಸ್ತಿ ಇದೆ, ಮಗಳು ವಿದೇಶದಲ್ಲಿದ್ದಾಳೆ. ಹಾಗಿದ್ದರೂ ಸ್ವಾಮೀಜಿ (talakala swamiji) ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ

ಮಂಗಳೂರು : ಬಜಪೆ (Bajpe) ಸಮೀಪದ ತಲಕಳದ ಶ್ರೀ ಕೃಷ್ಣ ದೇವಿ ಪ್ರಸಾದ ತೀರ್ಥ ಸ್ವಾಮೀಜಿ ( Talakala  Sri Krishna Deviprasad teertha Swamiji ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಈ ವಿಷಯ ಬೆಳಕಿಗೆ ಬಂದಿದೆ. ಫ್ಯಾನ್ ನಲ್ಲಿ ಶ್ರೀಗಳ (Talakala swamiji) ಶವ ನೇತಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಸ್ವಾಮೀಜಿಯವರ (Talakala swamiji) ಪೂರ್ವಾಶ್ರಮದ ಪತ್ನಿ ಬಜಪೆ ಪೊಲೀಸ್ ಠಾಣೆಗೆ ( Bajpe police ) ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈಗಾಗಲೇ ತಲಕಳ ಶ್ರೀಗಳ ಶವವನ್ನು ಪೋಸ್ಟ್ ಮಾರ್ಟಂಗಾಗಿ ಕಳುಹಿಸಲಾಗಿತ್ತು. ವೈದ್ಯರ ವರದಿ ನಂತರ ಸಾವಿನ ಕಾರಣ ತಿಳಿದು ಬರಲಿದೆ.

ಇದನ್ನೂ ಓದಿ : Robert Vadra : ಸಕ್ರಿಯ ರಾಜಕಾರಣ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಗಾಂಧಿ ಅಳಿಯ

ಪೂರ್ವಾಶ್ರಮದಲ್ಲಿ ದೇವಿಪ್ರಸಾದ್ ಶೆಟ್ಟಿ ಹೆಸರಿನಿಂದ ಗುರುತಿಸಲ್ಪಟ್ಟಿದ್ದ ಇವರು ಮುಂಬೈನಲ್ಲಿ  ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಬಳಿಕ ಸಂಸಾರದಲ್ಲಿ ವಿರಸನಾಗಿ ಸನ್ಯಾಸ ಸ್ವೀಕರಿಸಿದ್ದರು. ನಂತರ ಧರ್ಮಚಾವಡಿ ಹೆಸರಿನಲ್ಲಿ ಶಿವ ದೇವಾಲಯವನ್ನು ನಿರ್ಮಿಸಿದ್ದರು. ಇದೇ ದೇವಾಲಯದಲ್ಲಿ ಅನೇಕ ದೇವರ ಗುಡಿಗಳನ್ನೂ ಕೂಡಾ ನಿರ್ಮಿಸಲಾಗಿತ್ತು ( Talakala vishwanatha temple bajpe ) ಜೊತೆಗೆ ಇವರಿಗೆ ಸಾಕಷ್ಟು ಭಕ್ತರು ಕೂಡಾ ಇದ್ದರು. ಕಷ್ಟ ಎಂದು ಬಂದವರಿಗೆ ಭವಿಷ್ಯವನ್ನು ಹೇಳುತ್ತಿದ್ದರು.

ಇದನ್ನೂ ಓದಿ : Karnataka BJP : ಬಿಜೆಪಿ ರಾಜ್ಯ ಉಸ್ತುವಾರಿ ಸ್ಥಾನಕ್ಕೆ ಅಮಿತ್ ಶಾ ಆಪ್ತನ ಎಂಟ್ರಿ

ಕೆಲವೊಂದು ಮಂದಿಗೆ ಇವರು ಹೇಳಿದ ಮಾತು ಸತ್ಯವಾದ ಕಾರಣ ಒಂದಿಷ್ಟು ಪ್ರಚಾರದಲ್ಲೂ ಇದ್ದರು. ಪತ್ನಿ ಹಾಗೂ ಅವರ ತಾಯಿ ಧರ್ಮ ಚಾವಡಿ ಅಣತಿ ದೂರದಲ್ಲಿರುವ ಪೂರ್ವಾಶ್ರಮದ ಮನೆಯಲ್ಲಿ ವಾಸವಿದ್ದರು. ಮಗಳು ವಿದೇಶದಲ್ಲಿದ್ದಾರೆ. ಧರ್ಮ ಚಾವಡಿ ಪ್ರದೇಶದಲ್ಲಿ ಕೋಟಿಗಟ್ಟಲೆ ಬೆಲೆಯ ಆಸ್ತಿಯೂ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.

talakala

flipkart bounce scooter : ಪ್ಲಿಪ್ ಕಾರ್ಟ್ ನಲ್ಲಿ ಬೌನ್ಸ್ ಇಲೆಕ್ಟ್ರಿಕ್ ಸ್ಕೂಟರ್ : ಕೇವಲ 60 ಸಾವಿರ ರೂಪಾಯಿ

ಕಾಲ ಬದಲಾಗಿದೆ… ಇದೀಗ ಬೈಕ್ ಸ್ಕೂಟರ್ ಕೂಡಾ ಆನ್ ಲೈನ್ ನಲ್ಲೇ ದೊರಕುತ್ತಿದೆ.  ಬೌನ್ಸ್ ಕಂಪನಿ ಇದೀಗ ತನ್ನ ಬೈಕ್ ಸೇಲ್ ಮಾಡಲು flipkart ಮೊರೆ ಹೋಗಿದೆ.

ಬೆಂಗಳೂರು :  ಪೆಟ್ರೋಲ್ ದರ ಏರುತ್ತಿರುವ ಹಿನ್ನಲೆಯಲ್ಲಿ ಇಲೆಕ್ಟ್ರಿಕ್ ವಾಹನದತ್ತ ಜನರ ಚಿತ್ತ ಹರಿದಿದೆ. ಸರ್ಕಾರ ಕೂಡಾ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಇಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಒತ್ತು ನೀಡುತ್ತಿದೆ. ಖರೀದಿಸುವ ಮಂದಿಗೂ ಸಬ್ಸಿಡಿಯ ಆಸೆ ತೋರಿಸಲಾಗುತ್ತಿದೆ. ಹೀಗಾಗಿ ಇದೀಗ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪನಿಗಳ ಇಲೆಕ್ಟ್ರಿಕ್ ವಾಹನ ರಸ್ತೆಗಿಳಿದಿದೆ.ಆದರೆ ಮಾರುಕಟ್ಟೆಗೆ ಬಂದ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹತ್ತುತ್ತಿರುವ ಪರಿಣಾಮ ಒಂದಿಷ್ಟು ಹಿನ್ನಡೆಯಾಗಿದೆ.

ಈ ನಡುವೆ ಬೆಂಗಳೂರು ಮೂಲದ ಬೌನ್ಸ್ ಕಂಪನಿ ತಯಾರಿಸಿರುವ ಇನ್ಭಿನಿಟಿ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದ್ದು, ಉಳಿದ ಸ್ಕೂಟರ್ ಗಳಿಗೆ ಹೋಲಿಸಿದರೆ ದರ ಕಡಿಮೆ ಇದೆ. ಇಂದಿನಿಂದ ಈ ಸ್ಕೂಟರ್ ಮಾರಾಟ ಪ್ರಾರಂಭಗೊಂಡಿದ್ದು,  ಪ್ಲಿಪ್ ಕಾರ್ಟ್ ನ ಬಿಗ್ ಸೇವಿಂಗ್ ಡೇಸ್ ನಲ್ಲಿ ಈ ಸ್ಕೂಟರ್ ಕೂಡಾ ಲಿಸ್ಟ್ ಆಗಿದೆ.

ಇದನ್ನೂ ಓದಿ : Congress Protest : ಗುಜರಿಯಿಂದ ಕಾರು ತಂದು ಬೆಂಕಿ ಹಚ್ಚಿದ ಕಾಂಗ್ರೆಸ್ ಕಾರ್ಯಕರ್ತರು

ಆರ್ಡರ್ ಮಾಡಿದ 15 ದಿನಗಳಲ್ಲಿ ಸ್ಕೂಟರ್ ಮನೆ ಬಾಗಿಲಿಗೆ ಬರಲಿದೆ. ಪ್ರಸ್ತುತ ಕರ್ನಾಟಕ, ತೆಲಂಗಾಣ, ನವದೆಹಲಿ ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಮಾತ್ರ ಡೆಲಿವರಿ ನೀಡಲಾಗುತ್ತಿದೆ.

ಒಂದು ಸ್ಕೂಟರ್ ಬೆಲೆ 74,499 ರೂಪಾಯಿಯಾಗಿದ್ದು, ರಸ್ತೆಗೆ ಬರುವಾಗ 80 ಸಾವಿರ ರೂಪಾಯಿಯಾಗುತ್ತದೆ.  ಕೆಲ ರಾಜ್ಯಗಳು ಎಲೆಕ್ಟ್ರಿಕ್ ಸ್ಕೂಟರ್ ಗೆ ಸಬ್ಸಿಡಿ ಕೊಟ್ಟಿರುವ ಕಾರಣ, ಕರ್ನಾಟಕದಲ್ಲಿ 60 ಸಾವಿರ ರೂಪಾಯಿ, ರಾಜಸ್ಥಾನ 73 ಸಾವಿರ ರೂಪಾಯಿ, ದೆಹಲಿ 59 ಸಾವಿರ ರೂಪಾಯಿ ಮತ್ತು ಗುಜರಾತ್ ನಲ್ಲಿ 60 ಸಾವಿರ ರೂಪಾಯಿಗೆ ಬೌನ್ಸ್ ಇನ್ಫಿನಿಟಿ ಇ1 ಸ್ಕೂಟರ್ ಲಭ್ಯವಿರುತ್ತದೆ.

Tags: MAIN
ShareTweetSendShare

Discussion about this post

Related News

ಆಯುಷ್ಮಾನ್ ಭಾರತ್ ಯೋಜನೆ ದಕ ಜಿಲ್ಲೆಗೆ ೨೫ ಕೋಟಿ ೧೧ ಲಕ್ಷ ರೂಪಾಯಿ ಅನುದಾನ

ಆಯುಷ್ಮಾನ್ ಭಾರತ್ ಯೋಜನೆ ದಕ ಜಿಲ್ಲೆಗೆ ೨೫ ಕೋಟಿ ೧೧ ಲಕ್ಷ ರೂಪಾಯಿ ಅನುದಾನ

ನಾಳೆಯಿಂದ 6,7,8 ನೇ ತರಗತಿ ಪ್ರಾರಂಭ : ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾದ ಶಾಲೆಗಳು

ಕರಾವಳಿಯಲ್ಲಿ ಮಳೆಯ ಅಬ್ಬರ : ನಾಳೆ ಜುಲೈ 09ಕ್ಕೆ ಶಾಲಾ ಕಾಲೇಜುಗಳಿಗೆ ರಜೆ

Dose Mela in refresh cafe puttur three days

ಪುತ್ತೂರಿನಲ್ಲಿ ದೋಸೆ ಮೇಳ : ಮೂರು ದಿನಗಳ ಕಾಲ ನಡೆಯಲಿದೆ ದೋಸೆ ಜಾತ್ರೆ

ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ ಇನ್ನಿಲ್ಲ

ಅರುಣ್ ಪುತ್ತಿಲ ವಿರುದ್ಧ ತೊಡೆ ತಟ್ಟಿದ ಸಂಜೀವ ಮಠಂದೂರು

ಪುತ್ತಿಲ ಬಿಜೆಪಿಗೆ ಬಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ಗೆ ಸಂಕಷ್ಟ…?

ಹತ್ತೂರ ಒಡೆಯನ ಸನ್ನಿಧಿಯ ಅಭಿವೃದ್ಧಿಗೆ 2 ಕೋಟಿ ರೂ ಅನುದಾನ ತಂದ ಅಶೋಕ್ ರೈ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

Yakshagana : ಲೀಲಾವತಿಯವರಿಗೆ leelavathi baipadithaya ಪ್ರಶಸ್ತಿ ಒಲಿದಿದ್ದು ಹೇಗೆ…. ಮಗ ಬಿಚ್ಚಿಟ್ಟ ರಹಸ್ಯ

ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್