ನಟ ನಾನಾ ಪಾಟೇಕರ್ ವಿರುದ್ಧ #Metoo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ.
ತಾನು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಿ-ರಿಪೋರ್ಟ್ ಹಾಕಿರುವುದು ಆಕೆಯ ಅಸಮಾಧಾನಕ್ಕೆ ಕಾರಣವಾಗಿದೆ.
ತನುಶ್ರೀ ಮಾಡಿರುವ ಆರೋಪಗಳಿಗೆ ಸೂಕ್ತ ಸಾಕ್ಷಿಗಳಿಲ್ಲ, ನಾನಾ ಪಾಟೇಕರ್ ತಪ್ಪು ಮಾಡಿದ್ದಾರೆ ಅನ್ನುವುದಕ್ಕೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು.
ಇದನ್ನು ಪ್ರಶ್ನಿಸಿದ್ದ ತನುಶ್ರೀ ದತ್ತಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮತ್ತೊಮ್ಮೆ ತನಿಖೆಗೆ ಆದೇಶಿಸುವಂತೆ ಕೋರಿದ್ದರು. ಇದೀಗ ಅಲ್ಲೂ ನ್ಯಾಯ ಸಿಗದೇ ಇರೋದರಿಂದ ಆಕ್ರೋಶಗೊಂಡಿರುವ ತನುಶ್ರಿ ಮೋದಿಯವರಿಗೆ ಟ್ವೀಟ್ ಮಾಡುವ ಮೂಲಕ ನ್ಯಾಯ ಕೋರಿದ್ದಾಳೆ.

ಇಷ್ಟಕ್ಕೆ ಕೋಪ ಮಾಡಿಕೊಂಡಿರುವ ತನುಶ್ರೀ ಪ್ರಧಾನಿ ನರೇಂದ್ರ ಮೋದಿಯನ್ನು ಎಳೆದು ತಂದಿದ್ದಾಳೆ. ಯಾರದ್ದೋ ಸಿಟ್ಟು ಇನ್ಯಾರದ್ದೋ ಮೇಲೆ ಎಂಬಂತೆ ತನುಶ್ರೀ ದತ್ತಾ ಈಗ ಪ್ರಧಾನಿ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾಳೆ.
ನಾನಾ ವಿರುದ್ಧದ ಆರೋಪದಲ್ಲಿ ತನಗೆ ನ್ಯಾಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡಿರುವ ತನುಶ್ರಿ, ಭ್ರಷ್ಟಾಚಾರ ರಹಿತ ಭಾರತದಲ್ಲಿ ಏನಾಗುತ್ತಿದೆ. ಉತ್ತರಿಸಿ ಪ್ರಧಾನಿ ನರೇಂದ್ರ ಮೋದಿಯವರೇ ಅಂದಿದ್ದಾಳೆ.
ಮೋದಿಜೀ, ಏನಾಗುತ್ತಿದೆ ಈ ಭ್ರಷ್ಟಾಚಾರ ರಹಿತ ಭಾರತದಲ್ಲಿ? ದೇಶದ ಹೆಣ್ಣುಮಗಳೊಬ್ಬಳಿಗೆ ಸರಣಿ ಅಪರಾಧಿಯಿಂದ ದೌರ್ಜನ್ಯವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ಯತ್ನ ನಡೆದಿದೆ. ಆದ್ರೆ ಪೊಲೀಸರು ಮಾತ್ರ ಪ್ರಕರಣದಲ್ಲಿ ಸಾಕ್ಷಿಯ ಕೊರತೆ ಇದೆ ಅನ್ನುವ ಮೂಲಕ ಆರೋಪಿಗೆ ಕ್ಲೀನ್ ಚೀಟ್ ನೀಡುತ್ತಿದ್ದಾರೆ. ಇದೇನಾ ರಾಮ ರಾಜ್ಯ? ಈ ದೇಶದಲ್ಲಿ ಯಾಕೆ ಪದೇ ಪದೇ ಅಸತ್ಯ ಮತ್ತು ಅಧರ್ಮವೇ ಗೆಲ್ಲುತ್ತದೆ? ಉತ್ತರ ಕೊಡಿ ಮೋದಿಜೀ” ಎಂದು ಪ್ರಧಾನ ಮಂತ್ರಿಯನ್ನೇ ಪ್ರಶ್ನಿಸಿದ್ದಾರೆ.

ಈಕೆಯ ಮಾತುಗಳನ್ನು ಕೇಳಿದ್ರೆ ಅಳುವುದೋ ನಗುವುದೋ ಗೊತ್ತಾಗುತ್ತಿಲ್ಲ. ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ಸೂಕ್ತ ಸಾಕ್ಷಿಗಳನ್ನ ನೀಡಬಹುದಿತ್ತು. ಹೋಗ್ಲಿ ಬಿ ರಿಪೋರ್ಟ್ ವಿಷಯದಲ್ಲಿ ಮೇಲಿನ ಹಂತದ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಅದನ್ನು ಬಿಟ್ಟು 10 ವರ್ಷಗಳ ಹಳೆಯ ಪ್ರಕರಣವೊಂದನ್ನು ಈಗ ತಂದು ಮೋದಿ ಹೆಸರನ್ನು ಎಳೆದು ತರುವುದ್ಯಾಕೆ ಅರ್ಥವಾಗುತ್ತಿಲ್ಲ.
ಎಲ್ಲಾ ವಿಷಯಕ್ಕೂ ಪ್ರಧಾನಿಯವರ ಹೆಸರನ್ನೇ ಎಳೆಯುವುದಾದರೆ, ದೇಶದಲ್ಲಿ ಪೊಲೀಸ್ ವ್ಯವಸ್ಥೆ, ನ್ಯಾಯಾಲಯ ವ್ಯವಸ್ಥೆಗಳ ಅಗತ್ಯವೇನಿದೆ.
Discussion about this post