ಟಾಲಿವುಡ್ ಸಿನಿಮಾ ಹಾಗೂ ಬಿಗ್ ಬಾಸ್ ತೆಲುಗು ಸೀಸನ್ 1 ರ ಸ್ಪರ್ಧಿ ನಟ ಕತ್ತಿ ಮಹೇಶ್ ಕಾರು ನಿನ್ನೆ ಅಪಘಾತವಾಗಿದೆ.
ಆಂಧ್ರಪ್ರದೇಶದ ಚಿತ್ತೂರಿನಿಂದ ಹೈದರಾಬಾದ್ಗೆ ಬರುತ್ತಿದ್ದ ಲಾರಿಯೊಂದಕ್ಕೆ ಕಾರು ಡಿಕ್ಕಿ ಹೊಡೆದಿದ್ದು. ಕಾರಿನ ಪರಿಸ್ಥಿತಿ ನೋಡಿದರೆ ಮಹೇಶ್ ಗೆ ಗಂಭೀರ ಗಾಯಗಳಾಗಬೇಕಾಗಿತ್ತು.

ಆದರೆ ಏರ್ಬ್ಯಾಗ್ ಓಪನ್ ಆದ ಕಾರಣ ಮಹೇಶ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇದೀಗ ಮಹೇಶ್ ಅವರನ್ನು ನೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನೆಲ್ಲೂರು ಹೊರಭಾಗದ ಚಂದ್ರಶೇಖರಪುರಂ ಬಳಿ ಈಅಪಘಾತ ನಡೆದಿದ್ದು. ಘಟನೆಯಲ್ಲಿ ಮಹೇಶ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಇನ್ನೂ ಮಹೇಶ್ಗೆ ಪ್ರಜ್ಞೆ ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
Discussion about this post