ಹನುಮಜಯಂತಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ದಿನದಂದು ಆಚರಿಸಲಾಗುತ್ತದೆ.ಕರ್ನಾಟಕದಲ್ಲಿ ಏಪ್ರಿಲ್ 27 ರಂದು ಹನುಮ ಜಯಂತಿಯನ್ನು ಆಚರಿಸಲಾಗಿದೆ. ತಿಥಿ, ಮುಹೂರ್ತಗಳನ್ನು ಆಧರಿಸಿದಾಗ ಪ್ರಾಂತ್ಯಕ್ಕೆ ಅನುಗುಣವಾಗಿ ಈ ದಿನದಲ್ಲಿ ವ್ಯತ್ಯಾಸ ಕಂಡು ಬರುತ್ತದೆ.
ಉತ್ತರ ಭಾರತದ ಕಡೆ ನೋಡಿದರೆ ಚೈತ್ರಾ ಮಾಸದ ಪೂರ್ಣ ಹುಣ್ಣಿಮೆಯ ದಿನದಂದು ಅಥವಾ ಚೈತ್ರಾ ಮಾಸದ 15ನೇ ದಿನದಂದು ಹನುಮಜಯಂತಿಯ ಆಚರಿಸುವ ಕ್ರಮವಿದೆ.

ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ವೈಶಾಖ ಮಾಸದ 10ನೇ ದಿನದಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಅಂಜನೇಯ ಶ್ರೀರಾಮಚಂದ್ರನನ್ನು ಭೇಟಿ ಮಾಡಿದ ಅನ್ನುವ ಪ್ರತೀತಿ ಇದೆ. ಹೀಗಾಗಿಯೇ ಈ ದಿನವನ್ನು ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ.
ಆಂಧ್ರ ಹಾಗೂ ತೆಲಂಗಾಣದಲ್ಲಿ ಹನುಮಜಯಂತಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಚೈತ್ರಾ ಪೂರ್ಣಿಮೆಯಂದು ದೀಕ್ಷೆ ಪಡೆಯುವ ಹನುಮ ಭಕ್ತರು 41 ದಿನಗಳ ಕಾಲ ವೃತಾಚರಣೆಯನ್ನು ಕೈಗೊಂಡು ಕೃಷ್ಣ ಪಕ್ಷದ ವೈಶಾಖ ಮಾಸದ 10ನೇ ದಿನದಂದು ಅಂತ್ಯಗೊಳಿಸುತ್ತಾರೆ. ಅಂದೇ ಹನುಮಜಯಂತಿಯನ್ನು ಆಚರಿಸಲಾಗುತ್ತದೆ.

ಈ ವರ್ಷ ಏಪ್ರಿಲ್ 27 ದೀಕ್ಷೆ ಪಡೆಯಲಾಗಿದ್ದು ಇಂದು (ಜೂನ್ 4) ಕೊನೆಗೊಳ್ಳಲಿದೆ.
Discussion about this post