crossorigin="anonymous"> ದೇವರ ಮುಂದೆ ಕನ್ನಡಕ್ಕೆ ಕಿತ್ತಾಟ – ವಿಡಿಯೋ ಅಸಲಿಯೇ ಆದರೆ ಕಥೆ ಬೇರೊಂದಿದೆ... - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ದೇವರ ಮುಂದೆ ಕನ್ನಡಕ್ಕೆ ಕಿತ್ತಾಟ – ವಿಡಿಯೋ ಅಸಲಿಯೇ ಆದರೆ ಕಥೆ ಬೇರೊಂದಿದೆ…

Radhakrishna Anegundi by Radhakrishna Anegundi
12-08-18, 11 : 25 am
in ಟ್ರೆಂಡಿಂಗ್
arch
Share on FacebookShare on TwitterWhatsAppTelegram

ಇಂದು ಮುಂಜಾನೆಯಿಂದ ಫೇಸ್ ಬುಕ್ ನಲ್ಲಿ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಮ್ಮ ಫೇಸ್ ಬುಕ್ ಪೇಜ್ ನಲ್ಲೂ ಬೆಳ್ಳಂದೂರು ಎಕೋ ಸ್ಪೇಸ್ ಬಳಿ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ಕನ್ನಡಕ್ಕಾಗಿ ಹೋರಾಟದ ವಿಡಿಯೋ ಹಾಕಿದ್ದೇವೆ. ಆದರೆ ವಿಷಯವನ್ನು ಹೀಗೆ ಬಿಡುವುದು ಸರಿಯಲ್ಲ, ಅಬ್ಬರಿಸುವ ಬದಲು ವಿಷಯ ಏನು ಎಂದು ತಿಳಿದುಕೊಳ್ಳೋಣ ಎಂದು ನಾವು ಹೊರಟಾಗ ಮತ್ತೊಂದು ಕಥೆ ಅನಾವರಣಗೊಂಡಿದೆ.

ಬೆಳ್ಳಂದೂರು ಎಕೋ ಸ್ಪೇಸ್ ಬಳಿ ವೆಂಕಟೇಶ್ವರ ದೇವಾಲಯಕ್ಕೆ ಹೋದ ಕರುನಾಡ ಸೇವಕರು ತಂಡದ ಕನ್ನಡತಿ ಅನು ಅನ್ನುವವರು ತೆಲುಗು ಪೂಜೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ ಅಲ್ಲೇ ಇದ್ದ ಕನ್ನಡಿಗರು ಜಾಗೃತಿಯಾಗಿರಲಿಲ್ಲ. ಬದಲಾಗಿ ಕನ್ನಡತಿ ಮೇಲೆ ತಿರುಗಿ ಬಿದ್ದಿದ್ದರು. ಜೊತೆಗೆ ದೇವಸ್ಥಾನದ ಮಂದಿ ಕೂಡಾ ರಂಪಾಟ ಮಾಡಿದ್ದರು. ಇದು ಖಾಸಗಿ ದೇವಸ್ಥಾನ ಅನ್ನುವ ಸಮಜಾಯಿಷಿ ಬೇರೆ ಕೊಟ್ಟಿದ್ದರು.

ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯನ್ನು ನಾವು ಸಂಪರ್ಕಿಸಿದಾಗ ಅವರು ಮೊದಲು ಹುಡುಗಿಯೇ ಮೇಲೆ ದೂರುಗಳ ಸುರಿಮಳೆಗೈದರು. ದೇವಸ್ಥಾನ ಮುಚ್ಚುವ ಸಮಯವಾಗಿತ್ತು. ಹೀಗಾಗಿ ಅವರು ರಂಪಾಟ ಮಾಡಿದರು ಎಂದರು. ಅವೆಲ್ಲಾ ಬೇರೆ ಕಥೆ. ವಿಡಿಯೋದಲ್ಲಿ ಕನ್ನಡಕ್ಕಾಗಿ ಆಕೆ ದನಿ ಎತ್ತಿದ್ದಾರೆ ಅದರ ಬಗ್ಗೆ ಪ್ರತಿಕ್ರಿಯಿಸಿ ಎಂದಾಗ ನಮ್ಮೊಂದಿಗೆ ಮಾತನಾಡಿದ ಪುರುಷೋತ್ತಮ್ ಅನ್ನುವವರು ( ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ)

“ ಸರ್ ನಮಗೂ ಕನ್ನಡದ ಬಗ್ಗೆ ಪ್ರೀತಿಯಿದೆ, ನಾವು ಕನ್ನಡಿಗರೇ..ಆದರೆ ನಮಗೆ ಕನ್ನಡ ಬರುವು ಆಗಮ ಶಾಸ್ತ್ರ ಪಾಂಡಿತ್ಯ ಪಡೆದ ಅರ್ಚಕರು ಸಿಗುತ್ತಿಲ್ಲ. ಈ ಹಿಂದೆ ಕನ್ನಡದ ಅರ್ಚಕರು ನಮ್ಮಲ್ಲಿದ್ದರು. ಆದರೆ ಅವರು ಬೇರೆ ಕಡೆ ಹೋದರು. ಬಳಿಕ ಕನ್ನಡ ಅರ್ಚಕರಿಗಾಗಿ ನೂರಾರು ದೇವಸ್ಥಾನ ಸುತ್ತಿದ್ದೇನೆ. ಹತ್ತಾರು ಮಂದಿಗೆ ಮನವಿ ಮಾಡಿದ್ದೇನೆ. ಆದರೆ ಯಾರೊಬ್ಬರೂ ಬರಲು ಸಿದ್ದರಿಲ್ಲ. ಸಿದ್ದರಿಲ್ಲ ಅನ್ನುವುದಕ್ಕಿಂತ ಅರ್ಚಕರೇ ಸಿಕ್ಕಿಲ್ಲ ನನಗೆ”

ಅರ್ಚಕರು ಸಿಕ್ಕಿಲ್ಲ ಎಂದು ದೇವಸ್ಥಾನಕ್ಕೆ ಬಾಗಿಲು ಹಾಕುವುದು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ತೆಲುಗು, ತಮಿಳು ಅರ್ಚಕರನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ನಮಗಿದೆ. ಯಾರಾದರೂ ಕನ್ನಡ ಬರೋ, ಅಗಮಶಾಸ್ತ್ರದಲ್ಲಿ ಪಾಂಡಿತ್ಯ ಪಡೆದ ಅರ್ಚಕರಿದ್ದಾರೆ ತಿಳಿಸಿ. 15 ಸಾವಿರ ಸಂಬಳ, ಉಳಿದುಕೊಳ್ಳಲು ವ್ಯವಸ್ಥೆ, ತಟ್ಟೆ ಹಣದಲ್ಲಿ ಕಮಿಷನ್, ವಿಶೇಷ ಪೂಜೆ, ಅಭಿಷೇಕ,ಹೋಮ ಹವನಗಳು ಬುಕ್ಕಿಂಗ್ ಆದರೆ ಅದರಲ್ಲಿ ಒಂದಿಷ್ಟು ದುಡ್ಡು ಅರ್ಚಕರಿಗೆ ಸೇರುತ್ತದೆ.

ಹೀಗಾಗಿ ನಿಮಗೆ ಗೊತ್ತಿದ್ದರೆ ಕನ್ನಡ ಅರ್ಚಕರನ್ನು ನಮಗೆ ರೆಫರ್ ಮಾಡಿ ಎಂದು ಅವರು ತಮ್ಮ ನಂಬರ್ ಅನ್ನು ಕೂಡಾ ಕೊಟ್ಟಿದ್ದಾರೆ. ಅವರ ಸಂಖ್ಯೆ 8884133226.

ನಿಮಗೇನಾದರೂ ಸೂಕ್ತ ಕನ್ನಡ ಅರ್ಚಕರು ಸಿಕ್ಕರೆ ದಯವಿಟ್ಟು ತಿಳಿಸಿ.

ಹಾಗಂತ ಯುವತಿಯ ಜೊತೆಗೆ ದೇವಸ್ಥಾನದ ಮಂದಿ ವರ್ತಿಸಿದ ರೀತಿ ಸರಿ ಇಲ್ಲ. ಅದಕ್ಕೆ ಅವರು ಕ್ಷಮೆ ಕೇಳಲೇಬೇಕು. ಕನಿಷ್ಠ ಪಕ್ಷ ನಮ್ಮಲ್ಲಿ ಹೇಳಿದ ಸಮಸ್ಯೆಯನ್ನು ಇದೇ ಕನ್ನಡ ಹೋರಾಟಗಾರ್ತಿಗೆ ಮನವರಿಕೆ ಮಾಡಬಹುದಿತ್ತು. ಅದನ್ನು ಮಾಡದೆ ಹಾರಾಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನು ನೇತ್ರಾ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ.

ದೇವಸ್ಥಾನದಲ್ಲಿ ಏನಾಯ್ತು ಅನ್ನುವುದರ ವಿಡಿಯೋ ಇಲ್ಲಿದೆ

Tags: Anu NethraKannadaTempleಅನು ನೇತ್ರಾ
ShareTweetSendShare

Discussion about this post

Related News

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ಮಗಳ ಒಂಟಿ ಕೈಗೇ ತಂದೆಯಿಂದ ಅಂತ್ಯಸಂಸ್ಕಾರ : ವಯನಾಡಿನ ಕಣ್ಣೀರ ಕಥೆ

ಅಯೋಧ್ಯೆ ಮಂದಿರ ಉದ್ಘಾಟನೆಯಂದೆ ಹೆರಿಗೆ ಮಾಡಿಸಿ : ವೈದ್ಯರಿಗೆ ದುಂಬಾಲು

ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್