ಬೆಂಗಳೂರು : ಕೊರೋನಾ ತಡೆಯುವ ನಿಟ್ಟಿನಲ್ಲಿ ಒಂದಲ್ಲ ಒಂದು ಪ್ರಯತ್ನಗಳು ನಡೆಯುತ್ತಲೇ ಇದೆ. ಹನಿ ಹನಿ ಸೇರಿ ಹಳ್ಳ ಅನ್ನುವಂತೆ ಈ ಎಲ್ಲಾ ಪ್ರಯತ್ನಗಳು ಒಂದಲ್ಲ ಒಂದು ದಿನ ಫಲ ನೀಡುತ್ತದೆ ಅನ್ನುವ ವಿಶ್ವಾಸ ನಮ್ಮದು.
ಈ ನಡುವೆ ಬೆಂಗಳೂರು ಅಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎಲ್ ವೈ ರಾಜೇಶ್ ಕೊರೋನಾ ನಿಯಮ ಪಾಲನೆ ಹಾಗೂ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಥ್ರೆಡ್ ಫಾರ್ ನೇಷನ್ ಅನ್ನುವ ಅಭಿಯಾನ ಕೈಗೆತ್ತಿಕೊಂಡಿದ್ದಾರೆ.
ಇನ್ನು ಈ ಅಭಿಯಾನ ಕುರಿತಂತೆ ಮಾತನಾಡಿರುವ ರಾಜೇಶ “ಕೊರೋನಾ ಸೋಂಕು ಸಂಪೂರ್ಣವಾಗಿ ತೊಲಗುವ ತನಕ ಜನರ ಜೀವ ಹಾಗೂ ಜೀವನವನ್ನು ಸಂಕಷ್ಟದಿಂದ ಹೊರ ಬರಲು ಸಾಧ್ಯವಿಲ್ಲ. ಹೀಗಾಗಿ ಕೊರೋನಾ ವಿರುದ್ಧದ ಹೋರಾಟಕ್ಕೆ ವೇಗ ದೊರೆತಷ್ಟು ಬೇಗ ಸೋಂಕು ತೊಲಗುತ್ತದೆ. ಹೀಗೆ ಸೋಂಕು ತೊಲಗಬೇಕು ಅನ್ನುವುದಾದರೆ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಹಾಗೂ ಲಸಿಕೆ ಹಾಕಿಸಬೇಕು.ಇವೆಲ್ಲವೂ ಸರಿಯಾಗಿ ಪಾಲನೆಯಾಗಬೇಕಾದರೆ ನಾವು ಈ ನಿಯಮಗಳನ್ನು ಪದೇ ಪದೇ ನೆನಪಿಟ್ಟುಕೊಳ್ಳಬೇಕು. ಪದೇ ಪದೇ ನೆನಪಾಗಬೇಕಾದರೆ ಕೈಗೊಂದು ದಾರ ಕಟ್ಟಬೇಕು ಅನ್ನುವುದು ರಾಜೇಶ್ ಮಾತು.

ಒಬ್ಬರು ಈ ದಾರವನ್ನು ಕಟ್ಟಿದ ಬಳಿಕ ಬಳಿಕ ಮೂವರು ಸ್ನೇಹಿತರು ದಾರವನ್ನು ಕಟ್ಟುವಂತೆ ಪ್ರೇರೆಪಿಸಬೇಕು ಹೀಗೆ ಇದು ಮುಂದುವರಿಯಬೇಕು ಅನ್ನುವುದು ರಾಜೇಶ್ ಆಶಯ.
ಇನ್ನು ಅಭಿಯಾನಕ್ಕೆ ನಟ ಕಿಚ್ಚ ಸುದೀಪ್ ಕೂಡಾ ಕೈ ಜೋಡಿಸಿದ್ದಾರೆ. ಮಾತ್ರವಲ್ಲದೆ ನಟರಾದ ಕಿಶೋರ್, ವಸಿಷ್ಟ ಸಿಂಹ, ನಟಿ ಪಾರೂಲ್ ಯಾದವ್, ನಿರ್ದೇಶಕ ರಾಘವ್ ಶಿವಮೊಗ್ಗ, ಹೀಗೆ ನೂರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಕೇರಳದ ಅನೇಕ ಸೆಲೆಬ್ರೆಟಿಗಳು, ಶಿಕ್ಷಣ ತಜ್ಞರು, ವೈದ್ಯರು ಕೂಡಾ ಕೈ ಜೋಡಿಸಿದ್ದಾರೆ.
Discussion about this post