ನವದೆಹಲಿ : ಭಾರತದ ಕಾನೂನು ಮೇಲೆಯೇ ಸವಾರಿ ಮಾಡಲು ಹೊರಟಿದ್ದ ಟ್ವಿಟರ್ ಮೊಂಡಾಟಕ್ಕೆ ಅಂಕುಶ ಹಾಕುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ನಾನು ಆಡಿದ್ದೇ ಆಟ ಅನ್ನುವಂತೆ ವರ್ತಿಸುತ್ತಿದ್ದ ಟ್ವಿಟರ್ ಸಂಸ್ಥೆ ಇದೀಗ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ.
ಇತ್ತೀಚಿನ ನಿಯಮಗಳ ಪ್ರಕಾರ ದೂರುಗಳನ್ನು ಸ್ವೀಕರಿಸುವ ಹಾಗೂ ಅದಕ್ಕೆ ಪರಿಹಾರ ಒದಗಿಸುವ ನಿಟ್ಟಿಲ್ಲಿ ಅಧಿಕಾರಿಯೊಬ್ಬರನ್ನು ಟ್ವಿಟರ್ ನೇಮಿಸಬೇಕಿತ್ತು. ಫೇಸ್ ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ಸಂಸ್ಥೆಗಳು ಅಧಿಕಾರಿಗಳನ್ನೂ ನೇಮಿಸಿದರೂ ಟ್ವಿಟರ್ ಮಾತ್ರ ತನ್ನ ಮೊಂಡಾಟ ಮುಂದುವರಿಸಿತ್ತು. ತನ್ನ ಉದ್ಯೋಗಿಗಳಲ್ಲದ್ದವರನ್ನು ಕುಂದುಕೊರತೆ ಅಧಿಕಾರಿ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಿ ಭಾರತಕ್ಕೆ ಸೆಡ್ಡು ಹೊಡೆದಿತ್ತು.
ಹೀಗಾಗಿಯೇ ವಾಕ್ ಸ್ವಾತಂತ್ರ್ಯದ ಪ್ರತಿಪಾದಕ ಅನ್ನುವಂತೆ ವರ್ತಿಸುತ್ತಿದ ಟ್ವೀಟರ್ ಅನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಇರುವ ವಿನಾಯತಿಯಿಂದ ಹೊರಗಿಟ್ಟಿದೆ. ಅಷ್ಟೇ ಅಲ್ಲದೆ ಮಧ್ಯವರ್ತಿ ಮಾಧ್ಯಮ ಸ್ಥಾನಮಾನವನ್ನು ಟ್ವೀಟರ್ ಕಳೆದುಕೊಂಡಿದೆ. ಐಟಿ ಕಾನೂನು ಪ್ರಕಾರ ಆಕ್ಷೇಪಾರ್ಹ ಪೋಸ್ಟ್ ವಿಚಾರದಲ್ಲಿ ಆ ಸಂಸ್ಥೆ ಮುಖ್ಯಸ್ಥರು ಕಾನೂನಿಂದ ವಿನಾಯತಿ ಪಡೆಯುತ್ತಾರೆ. ಆದರೆ ಇನ್ನು ಮುಂದೆ ಯಾವುದೇ ಕಾನೂನು ಉಲ್ಲಂಘನೆಯ ಟ್ವೀಟ್ ಗಳ ಸಂಬಂಧ ಪ್ರಕರಣ ದಾಖಲಾದರೆ ಟ್ವೀಟ್ ಸಂಸ್ಥೆಯ ಮುಖ್ಯಸ್ಥರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ.
ಇನ್ನು ಸರ್ಕಾರ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಐಟಿ ಉದ್ಯಮದ ಹಿರಿಯ ಟಿ.ವಿ ಮೋಹನ್ ದಾಸ್ ಪೈ ನಿಯಮಗಳನ್ನು ಪಾಲಿಸದ ಟ್ವಿಟರ್ ಅನ್ನು ದಂಡನೆಗೆ ಗುರಿ ಮಾಡಬೇಕು ಎಂದು ಹೇಳಿದ್ದಾರೆ. ಟ್ವಿಟರ್ ತಟಸ್ಥವಾಗಿಲ್ಲ ಎಂದು ದೂರಿರುವ ಅವರು ಈ ಸೈಟ್ ಸೈದ್ಧಾಂತಿಕ, ಪಕ್ಷಪಾತದ ಸಾಮಾಜಿಕ ಜಾಲತಾಣವಾಗಿದೆ ಎಂದು ದೂರಿದ್ದಾರೆ.
Discussion about this post