ಬೆಂಗಳೂರು: ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯದಿಂದ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿದ್ದ ಹರೀಶ್ ಬಂಗೇರ ಕೊನೆಗೂ ದೇಶ ಪ್ರೇಮಿಗಳ ಸತತ ಪ್ರಯತ್ನದ ಫಲವಾಗಿ ಎರಡು ವರ್ಷದ ಬಳಿಕ ತವರಿಗೆ ಮರಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದ ಅವರನ್ನು ಕುಟುಂಬ ಸದಸ್ಯರು ಸ್ವಾಗತಿಸಿದ್ದಾರೆ.
ಕುಂದಾಪುರ ಬೀಜಾಡಿಯ ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಮೂಡಬಿದರೆ ಮೂಲದ ಮುಸ್ಲಿಂ ಸಹೋದರರು ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದರು. ಈ ಸಂಬಂಧ 2019ರ ಡಿಸೆಂಬರ್ ನಲ್ಲಿ ಸೌದಿ ಪೊಲೀಸರು ಅವರನ್ನು ಈ ಸಂಬಂಧ ಬಂಧಿಸಿದ್ದರು. ಇದೊಂದು ಸುಳ್ಳು ಪ್ರಕರಣವಾಗಿದ್ದರೂ ಸೌದಿ ಕಾನೂನು ಪ್ರಕಾರ ಅವರ ಬಿಡುಗಡೆ ಅಷ್ಟು ಸುಲಭವಿರಲಿಲ್ಲ.

ಈ ನಡುವೆ ಹರೀಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವ ಕುರಿತಂತೆ ಅವರ ಕುಟುಂಬಸ್ಥರು ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದರು. ಬಳಿಕ ಮೂಡಬಿದರೆ ಪೊಲೀಸರು ಕಿರಾತಕರಿಬ್ಬರನ್ನು ಬಂಧಿಸಿದರು. ಇದಾದ ಬಳಿಕ ಹರೀಶ್ ಬಿಡುಗಡೆಗೆ ಇನ್ನಿಲ್ಲದ ಪ್ರಯತ್ನಗಳು ಪ್ರಾರಂಭವಾಯ್ತು. ಸೌದಿಯಲ್ಲಿ ವಾಸವಿರುವ ದೇಶ ಪ್ರೇಮಿಗಳು, ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ ಶಾನುಭಾಗ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೀಗೆ ಅನೇಕ ಮಂದಿ ಹರೀಶ್ ಬಿಡುಗಡೆಯಲ್ಲಿ ಕೈ ಜೋಡಿಸಿದ್ದಾರೆ, ದುರಂತ ಅಂದ್ರೆ ಅಮಾಯಕನೊಬ್ಬನಿಗೆ ನ್ಯಾಯ ಒದಗಿಸುವ ವಿಚಾರದಲ್ಲೂ ಸಾಕಷ್ಟು ರಾಜಕೀಯ ಕೆಸರೆರಚಾಟಗಳು ನಡೆದಿತ್ತು.
Discussion about this post