crossorigin="anonymous"> ವೃದ್ಧಾಶ್ರಮದಲ್ಲಿ ವೃದ್ಧೆಯ ಕೊಲೆ : ಉಸಿರು ಫೌಂಡೇಷನ್ ಮುಖ್ಯಸ್ಥ ಅಂದರ್ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ವೃದ್ಧಾಶ್ರಮದಲ್ಲಿ ವೃದ್ಧೆಯ ಕೊಲೆ : ಉಸಿರು ಫೌಂಡೇಷನ್ ಮುಖ್ಯಸ್ಥ ಅಂದರ್

ವೃದ್ಧಾಶ್ರಮ ಅನಾಥಶ್ರಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಒಂದಲ್ಲ ಎರಡಲ್ಲ. ಸರ್ಕಾರ ಈ ಬಗ್ಗೆ ತಂದಿರುವ ಕಾನೂನು ಜಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡದಿದ್ದರೆ ಈ ದಂಧೆಗೆ ಬ್ರೇಕ್ ಬೀಳುವುದಿಲ್ಲ.

Radhakrishna Anegundi by Radhakrishna Anegundi
17-08-21, 9 : 13 am
in ಕ್ರೈಮ್
lovers suicide bidar parents-refuse-marriage
Share on FacebookShare on TwitterWhatsAppTelegram

ಬೆಂಗಳೂರು : ವೃದ್ಧಾಶ್ರಮದಲ್ಲಿದ್ದ ವೃದ್ಧೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಊಟಜ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಘಟನೆ ಸಂಬಂಧ ಉಸಿರು ಫೌಂಡೇಷನ್ ಮುಖ್ಯಸ್ಥ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಕಮಲಮ್ಮ (82) ಎಂದು ಗುರುತಿಸಲಾಗಿದೆ.

ಹಳೆ ಮದ್ರಸಾ ರಸ್ತೆಯ ಭಟ್ಟರಹಳ್ಳಿಯ ನಿವಾಸಿ ಕಮಲಮ್ಮ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಸಲುವಾಗಿ ಕಮಲಮ್ಮ ಪುತ್ರ ತಾಯಿಯನ್ನು ನಾಗರಬಾವಿಯಲ್ಲಿರುವ ಉಸಿರು ಫೌಂಡೇಷನ್ ಗೆ ದಾಖಲಿಸಿದ್ದರು. ಇದಕ್ಕಾಗಿ ಪ್ರತೀ ತಿಂಗಳು 10 ಸಾವಿರ ರೂಪಾಯಿ ಹಣವನ್ನು ಪಾವತಿಸುತ್ತಿದ್ದರು.

ಈ ನಡುವೆ ಕಮಲಮ್ಮನ ಪುತ್ರ ರಾಮಚಂದ್ರನಿಗೆ ಕರೆ ಮಾಡಿದ ಫೌಂಡೇಷನ್ ಸಿಬ್ಬಂದಿ, ನಿಮ್ಮ ತಾಯಿಗೆ ಉಸಿರಾಟದ ತೊಂದರೆಯಾಗಿದೆ, ಬೇಗ ಬನ್ನಿ ಎಂದು ಸೂಚಿಸಿದ್ದಾರೆ. ರಾಮಚಂದ್ರ ಬಂದು ನೋಡಿದಾಗ ಕೊಠಡಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ತಾಯಿ ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ಅಂಬ್ಯುಲೆನ್ಸ್ ನಲ್ಲಿ ಶವ ತೋರಿಸಿದ್ದಾರೆ. ಆಗ ಅನುಮಾನಗೊಂಡ ರಾಮಚಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡ ವೇಳೆ ಹೊರ ಬಿದ್ದಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ. ವೃದ್ಧಾಶ್ರಮದ ಹೆಸರಿನಲ್ಲಿ ನಡೆದ ದಂಧೆ.

ಉಸಿರು ಫೌಂಡೇಷನ್ ನ ಯೋಗೇಶ್ ನಾಗರಬಾವಿಯಲ್ಲಿ ಸುಸಜ್ಜಿತ ವೃದ್ಧಾಶ್ರಮ ನಿರ್ಮಿಸಿಕೊಂಡಿದ್ದ. ಜೊತೆಗೆ ಕಂಠೀರವ ಸ್ಟುಡಿಯೋ ಬಳಿ ಮತ್ತೊಂದು ಶಾಖೆಯನ್ನು ತೆರೆದಿದ್ದ. ನಾಗರಬಾವಿಯ ಹೈಟೆಕ್ ಆಗಿದ್ರೆ, ಕಂಠೀರವ ಸ್ಟೇಡಿಯಂನ ಶಾಖೆಯಲ್ಲಿ ಯಾವುದೇ ಸೌಲಭ್ಯ ಇರಲಿಲ್ಲ.

ಯಾರಾದರೂ ವೃದ್ಧಾಶ್ರಾಮ ಬೇಕು ಎಂದು ಕರೆ ಮಾಡಿದರೆ, ನಾಗರಬಾವಿಗೆ ಕರೆಸುತ್ತಿದ್ದ. ಜೊತೆಗೆ ತಿಂಗಳಿಗೆ 30 ರಿಂದ 40 ಸಾವಿರ ಬಿಲ್ ಮಾಡುತ್ತಿದ್ದ. ಇನ್ನು ಹೆಚ್ಚು ಕಾಯಿಲೆ ಅಥವಾ ಗಲಾಟೆ ಮಾಡುವ ವೃದ್ಧರನ್ನು ಕಂಠೀರವ ಸ್ಟೇಡಿಯಂನ ಶಾಖೆಗೆ ಸ್ಥಳಾಂತರಿಸಿ, ಅಲ್ಲಿ ಸೆಲ್ಲರ್ ನಲ್ಲಿ ಕೂಡಿ ಹಾಕುತ್ತಿದ್ದ. ಜೊತೆಗೆ ಎರಡು ದಿನಕ್ಕೊಮ್ಮೆ ಊಟ ನೀಡುತ್ತಿದ್ದ.  ವೃದ್ಧರನ್ನು ನೋಡಲು ಬರುವುದಾಗಿ ಕುಟುಂಬಸ್ಥರು ತಿಳಿಸಿದರೆ, ತಕ್ಷಣ ಸ್ವಚ್ಛ ಮಾಡಿ 1 ನೇ ಮಹಡಿಗೆ ಕರೆಸಿ ಭೇಟಿ ಮಾಡಿಸುತ್ತಿದ್ದ.

ಹೀಗೆ ಕಮಲಮ್ಮ ಅವರನ್ನು ಸೆಲ್ಲರ್ ನಲ್ಲಿ ಕೂಡಿ ಹಾಕಲಾಗಿತ್ತು. ಆಗಸ್ಟ್ 7 ರಂದು ಕಮಲಮ್ಮ ಅವರ ಮೇಲೆ ವಸಂತಮ್ಮ ಅನ್ನುವ ಮತ್ತೊಬ್ಬ ವೃದ್ಧೆ ಊಟ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ಮಾಡಿದ್ದರು. ಚೇರ್ ನಿಂದ ಹಲ್ಲೆ ನಡೆದ ಕಾರಣ ತೀವ್ರ ರಕ್ತಸ್ರಾವವಾಗಿ ಕಮಲಮ್ಮ ಮೃತಪಟ್ಟಿದ್ದರು.ಬಳಿಕ ಸಾವಿನ ಸುದ್ದಿ ಮುಚ್ಚಿಡುವ ಸಲುವಾಗಿ 1 ಮಹಡಿಗೆ ಶವ ಸಾಗಿಸಿ, ಬಟ್ಟೆ ಬದಲಿಸಿ, ರಕ್ತದ ಕಲೆಗಳನ್ನು ಸ್ವಚ್ಛ ಮಾಡಿ ಬಳಿಕ ಮಗನಿಗೆ ಕರೆ ಮಾಡಿದ್ದರು.

ಇದೀಗ ಆರ್ ಎಂ ಸಿ ಯಾರ್ಡ್ ಪೊಲೀಸರು ಉಸಿರು ಫೌಂಡೇಷನ್ ಮುಖ್ಯಸ್ಥ ಯೋಗೇಶ್, ನೌಕರರಾದ ಭಾಸ್ಕರ್, ಪ್ರೇಮಾ, ಮಂಜುನಾಥ್ ಹಾಗೂ ಕೊಲೆ ಮಾಡಿದ ವಸಂತಮ್ಮ ಅವರನ್ನು ಬಂಧಿಸಿದ್ದಾರೆ.

Tags: Crime
Share30TweetSendShare

Discussion about this post

Related News

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ಅತ್ತ ದರ್ಶನ್ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ಇತ್ತ ಎಸಿಪಿ ಚಂದನ್ ಮುಂದೆ ಹಾಜರಾದ ಚಿಕ್ಕಣ್ಣ

ಜೈಲಲ್ಲಿ ದರ್ಶನ್’ಗೆ ಆತಿಥ್ಯ : ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡ ಆಯುಕ್ತ ಬಿ. ದಯಾನಂದ್

ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ : ಜೈಲಲ್ಲಿ ದರ್ಶನ್ ದರ್ಬಾರ್

ಅಪ್ಪನಿಂದ ಕಿರುಕುಳ ಮಗನಿಂದ ಅತ್ಯಾ*ಚಾರ | ರಿಪಬ್ಲಿಕ್ ಹಾಸನದ ಕಾಮಕಾಂಡ Karnataka sex tape scandal

ಐವರು ಮಂಗಳ ಮುಖಿಯರ ಅಟ್ಟಹಾಸ : ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತನೆ

ತಾಯಿ ಮಗನ ಅಪಹರಣ : 9 ಮಂದಿ ಕ್ರಿಮಿನಲ್ ಗಳ ಬಂಧನ

ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ರ ಜನತೆ : ಫ್ಲೈ ಓವರ್ ನಿಂದ ವ್ಹೀಲಿಂಗ್ ಕೋರರ ಬೈಕ್ ಎಸೆದ ನಾಗರಿಕರು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್