ನವದೆಹಲಿ : ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯ ಯಾವುದೇ ಕ್ಷಣದಲ್ಲಿ ಭಾರತಕ್ಕೆ ಗಡೀಪಾರು ಆಗುವ ಸಂಭವ ಇದೆ ಅನ್ನುವ ಸುದ್ದಿ ಹರಿದಾಡುತ್ತಿದೆ.
ಈ ಸುದ್ದಿ ಪಕ್ಕಾ ಸುಳ್ಳು ಅನ್ನುವುದು ಇದೀಗ ಗೊತ್ತಾಗಿದೆ. ಮಲ್ಯ ಗಡೀಪಾರಿಗೆ ವೇದಿಕೆ ಸಿದ್ಧವಾಗಿದೆ. ಆದರೆ ಅದು ಜಾರಿಯಾಗಬೇಕಾದರೆ ಇನ್ನಷ್ಟು ದಿನಗಳು ಹಿಡಿಯಬಹುದು. ಯಾವುದೇ ಕ್ಷಣದಲ್ಲಿ ಅದು ಸಾಧ್ಯವಿಲ್ಲ.
ಈ ಬಗ್ಗೆ TOI ಪತ್ರಿಕೆ ಮಲ್ಯ ಪರ ವಕೀಲರು ಹಾಗೂ ಇತರೆ ಅಧಿಕಾರಿಗಳನ್ನು ಮಾತನಾಡಿಸಿದ್ದು, ಮಾಧ್ಯಮಗಳ ವರದಿ ನೋಡಿದ್ರೆ ಇಂದು ರಾತ್ರಿಯೇ ಮಲ್ಯ ಭಾರತಕ್ಕೆ ಆಗಮಿಸುತ್ತಾರೆ ಅನ್ನುವಂತಿದೆ.
ಆದರೆ ಅಂತಹ ಯಾವುದೇ ಸಾಧ್ಯತೆಗಳಿಲ್ಲ. ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಮಲ್ಯ ಭಾರತಕ್ಕೆ ಬರಲು ಮತ್ತಷ್ಚು ದಿನಗಳು ಬೇಕಾಗಬಹುದು ಎನ್ನಲಾಗಿದೆ.
Discussion about this post