ಸದಾ ವಿವಾದತ್ಮಾಕ ಹೇಳಿಕೆ ಕೊಟ್ಟು ಯುಟರ್ನ್ ಹೊಡೆಯುವುದರಲ್ಲೇ ಫೇಮಸ್ ಆಗಿರುವ ವಿನಯ್ ಗುರೂಜಿ ಇದೀಗ ಮತ್ತೊಮ್ಮೆ ಉಲ್ಟಾ ಹೊಡೆದಿದ್ದಾರೆ.
ಈ ಹಿಂದೆ ನಾಗರಾಧನೆ ಕುರಿತಂತೆ ಹೇಳಿಕೆ ಕೊಟ್ಟು ಕರಾವಳಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ವಿನಯ್ ಗುರೂಜಿ ಇತ್ತೀಚೆಗೆ ಸುದೀಪ್ ಬಗ್ಗೆ ಹೇಳಿಕೆ ಕೊಟ್ಟು ಕಿಚ್ಚನ ಅಭಿಮಾನಿಗಳಿಂದ ಛೀ…ಥೂ ಎಂದು ಉಗಿಸಿಕೊಂಡಿದ್ದರು.
ಇದೀಗ ಈ ಮಾತುಗಳು ಸಾಕಷ್ಟು ಅನಾಹುತ ಸೃಷ್ಟಿಸುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತಿಕೊಂಡಿರುವ ವಿನಯ್ ಗುರೂಜಿ, ಈಗ ಸುದೀಪ್ ಮಾಣಿಕ್ಯ, ಹೆಬ್ಬುಲಿ ಅಂತ ಹೊಗಳಿದ್ದಾರೆ. ಶಿವಮೊಗ್ಗದ ಪುಟ್ಟ ಹಳ್ಳಿಯಿಂದ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವಾಗ ಸುದೀಪ್ ಎಷ್ಟು ಕಷ್ಟ ಅನುಭವಿಸಿ ಬಂದಿರಬೇಕು. ಸುದೀಪ್ ಗುಣಕ್ಕೆ, ಸಾಧನೆಗೆ ಸಾಷ್ಟಾಂಗ ನಮಸ್ಕಾರ ಎಂದಿದ್ದಾರೆ.
ಗಾಂಧಿನಗರದಲ್ಲಿ ಮುಂದೆ ಬರೋದು ಅಷ್ಟು ಸುಲಭದ ಮಾತಲ್ಲ. ನಾವು ಅದನ್ನು ಗೌರವಿಸುತ್ತೇವೆ. ಕೋಮುಗಲಭೆ ಸೃಷ್ಟಿಸೋಕೆ ಕೆಲವು ಗುಂಪುಗಳು ಪ್ರಯತ್ನ ಮಾಡುತ್ತಲೇ ಇರುತ್ತವೆ. ನನ್ನ ಭಾಷಣಗಳನ್ನ ಇಟ್ಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದೀಪ್ ಈ ಹಿಂದೆ ಹೇಳಿದ್ದೇನು ಅನ್ನುವುದು ಈ ಲಿಂಕ್ ನಲ್ಲಿದೆ.
Discussion about this post