ಕನ್ನಡದ ಸ್ಯಾಂಡಲ್ ವುಡ್ ನಲ್ಲಿ ಹೊಸ ನಿರೀಕ್ಷೆಯ ಜೊತೆಗೆ ಹೊಸ ಭರವಸೆ ಹುಟ್ಟಿಸ್ತಿರೋ ಸಿನಿಮಾ ವಿರಾಟ ಪರ್ವ.
ಸೆಟ್ಟೇರಿದಾಗಿನಿಂದ್ಲೂ ವಿಭಿನ್ನ ವಿಚಾರಗಳಿಂದಲೇ ಕುತೂಹಲ ಹೆಚ್ಚಿಸಿದೆ. ಮುದ್ದು ಮನಸೇ ಖ್ಯಾತಿಯ ಅನಂತ್ ಶೈನ್ ನಿರ್ದೇಶನದಲ್ಲಿ ಎಸ್. ಆರ್ ಮಿಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸುನೀಲ್ ರಾಜ್ ನಿರ್ಮಾಣ ಮಾಡ್ತಿರೋ ಈ ಚಿತ್ರಕ್ಕೆ, ವಿನೀತ್ ರಾಜ್ ಮೆನನ್ ಸಂಗೀತ ಒದಗಿಸಿದ್ದಾರೆ.

ಶಿವು ಬಿಕೆ ಶಿವಸೇನಾ ಛಾಯಾಗ್ರಹಣ ಜವಾಬ್ದಾರಿಯ ಜೊತೆಗೆ ಅರುಗೌಡ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಇದಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ರಿಲೀಸ್ ಮಾಡಿದ್ದು, ಎರಡನೇ ಪೋಸ್ಟರ್ ಅನ್ನು ಮೈಸೂರಿನ ಹುತಾತ್ಮ ಯೋಧ ಹೇಮಚಂದರ್ ರ ಪೋಷಕರಿಂದಲೇ ಬಿಡುಗಡೆ ಮಾಡಿಸಲಾಗಿದೆ.

ಚಿತ್ರದಲ್ಲಿ ಯಶ್ ಶೆಟ್ಟಿ ವೀರಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೇಶಕ್ಕಾಗಿ ಪ್ರಾಣತೆತ್ತ ವೀರ ಕನ್ನಡಿಗ, ಭವ್ಯ ಭಾರತಾಂಬೆಯ ಹೆಮ್ಮೆಯ ಪುತ್ರ ಎನ್ನಿಸಿಕೊಂಡಂತಹ ಮೈಸೂರಿನ ಹುತಾತ್ಮ ಯೋಧ ಹೇಮಚಂದರ್, ಪೋಷಕರಿಂದ ಸಿನಿಮಾದ ಸೈನಿಕನ ಲುಕ್ ಅನ್ನು ಬಿಡುಗಡೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಟಾಕ್ ಕ್ರಿಯೇಟ್ ಮಾಡಿರೋ ವಿರಾಟಪರ್ವ ಚಿತ್ರತಂಡ ಇದೀಗ ಮತ್ತೊಂದು ವಿಚಾರವಾಗಿ ಸದ್ದು ಮಾಡ್ತಿದೆ. ಅಷ್ಟೇ ಅಲ್ಲದೆ ಮೂರು ವಿಭಿನ್ನ ಕಥೆಗಳ ಒಟ್ಟಿಗೆ ಹೊತ್ತೊಯ್ಯೋ ವಿರಾಟಪರ್ವ ಸಿನಿಮಾಗೆ ಅರುಗೌಡ, ಯಶ್ ಶೆಟ್ಟಿಯ ಜೊತೆಗೆ ಖ್ಯಾತ ನಿರ್ದೇಶಕ ಮಂಸೋರೆ ಬಣ್ಣ ಹಚ್ಚುತ್ತಿದ್ದಾರೆ.

ವಿರಾಟಪರ್ವ ಚಿತ್ರದಲ್ಲಿನ ತಮ್ಮ ಪಾತ್ರವನ್ನ ಕೇಳಿ ಎಕ್ಸೈಟ್ ಆಗಿರೋ ಮಂಸೋರೆ ತುಂಬಾ ಉತ್ಸಾಹದಿಂದಲೇ ನಟನೆಗೆ ಒಪ್ಪಿದ್ದಾರೆ. ವಿಭಿನ್ನ ವಿಚಾರಗಳಿಂದಲೇ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಹುಟ್ಟುಹಾಕಿರೋ ವಿರಾಟ ಪರ್ವ ಸಿನಿಮಾ ತಂಡ ಸದ್ಯದಲ್ಲೇ ಟೀಸರ್ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ.
Discussion about this post