crossorigin="anonymous"> ನಾವು ವೋಕಲ್ ಆಗೋದು ಲೋಕಲ್ ಆಗಿದ್ದಾಗ ಮಾತ್ರ : ನಾಗಾಭರಣ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ನಾವು ವೋಕಲ್ ಆಗೋದು ಲೋಕಲ್ ಆಗಿದ್ದಾಗ ಮಾತ್ರ : ನಾಗಾಭರಣ

Radhakrishna Anegundi by Radhakrishna Anegundi
16-09-20, 11 : 04 pm
in ಗಾಂಧಿ ಕ್ಲಾಸ್, ಮನೋರಂಜನೆ
vishwas tech pvt ltd 02
Share on FacebookShare on TwitterWhatsAppTelegram

ಬೆಂಗಳೂರು : ಬೆಂಗಳೂರಿನ ವಿಶ್ವಾಸ್ ಟೆಕ್ ಪ್ರೈವೆಟ್ ಲಿಮಿಟೆಡ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆ ಗೆಳೆಯ ವಿ-ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಖ್ಯಾತ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ರವಿ ಹಾಗೂ ಕವಿ ಹಾಗೂ ಸಾಹಿತಿ ದುಂಡಿರಾಜು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ನಿರ್ದೇಶಕ ಟಿ.ಎಸ್.ನಾಗಾಭರಣ, ನಾವು ವೋಕಲ್ ಆಗೋದು ಲೋಕಲ್ ಆಗಿದ್ದಾಗ ಮಾತ್ರ. ನಾವು ನಮ್ಮತನವನ್ನು ಉಳಿಸಿಕೊಂಡಾಗ ಮಾತ್ರ ಅದು ನಮ್ಮನ್ನು ಮೀರಿ ಬೆಳೆಯುತ್ತಾ ಹೋಗುತ್ತೆ. ಇಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ವಿ-ಪೇ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಆಗಾಗಿ ನಾವು ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಆಪ್ ನ ಮೂಲ ಭಾಷೆ ಕೂಡ ಕನ್ನಡವಾಗಿರಬೇಕು ಎಂದು ಸಲಹೆ ನೀಡಿದರು. ನಾನು, ನನ್ನದು ಎಂದು ಹೆಮ್ಮೆಯಿಂದ ಬಂದಾಗ ನನ್ನತನ ಉಳಿಯುತ್ತೆ. ಅದರ ಮುಖಾಂತರ ನಾವು ಇಡೀ ಪ್ರಚಂಚಕ್ಕೆ ಒಂದು ಮಾದರಿ ಇಡಬಹುದು. ನಮ್ಮ ಬಗ್ಗೆ ನಾವು ಹೆಮ್ಮೆ ಪಡೆದುಕೊಂಡಾಗ ಮಾತ್ರ ಪ್ರಪಂಚಕ್ಕೆ ಮಾದರಿ ಆಗಬಹುದು.

vishwas tech pvt ltd 03

ಇಂದು ಬಿಡುಗಡೆ ಆಗಿರುವ ಆಪ್ ಇಡಿ ಭಾರತಕ್ಕೆ ಕೊಡುಗೆ ಆಗಬೇಕು. ನೀವು ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ಇವತ್ತು ತಂತ್ರಾಂಶಗಳಲ್ಲಿ ಗಣಕತಂತ್ರಗಳಲ್ಲಿ ಕನ್ನಡವನ್ನು ಬಹಳ ಚೆನ್ನಾಗಿ ಬಳಸುತ್ತಿದ್ದೇವೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಆಪ್ ಗಳು ರೆಡಿಯಾಗಿವೆ. ಯಾರಿಗೂ ಕೀಳರಿಮೆ ಬೇಡ, ಕನ್ನಡದಲ್ಲಿ ಎಲ್ಲವೂ ಆಗುತ್ತೆ. ನವೆಂಬರ್ ಒಂದರಿಂದ ಯುಆರ್ ಎಲ್ ಕೂಡ ಕನ್ನಡದಲ್ಲೇ ಬರಲಿದೆ ಎಂದು ಇದೇವೇಳೆ ತಿಳಿಸಿದರು.
ಸ್ಪರ್ಧೆ ಇಲ್ಲದ ಬದುಕಿಲ್ಲ. ಇಂತಹ ಸನ್ನಿವೇಶವನ್ನು ಒಂದು ಸವಾಲಾಗಿ ಸ್ವೀಕರಿಸಬೇಕು. ಆ ಸವಾಲನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಳ್ಳಬೇಕು, ಅಂತಹ ಅದ್ಭುತ ಅವಕಾಶ ನಿಮ್ಮೆಲ್ಲರಿಗೂ ಸಿಕ್ಕಿದೆ, ಅದನ್ನು ಬಳಸಿಕೊಂಡು ವಿಶ್ವಾಸ್ ವಿ-ಪೇ ರೈತರ ಮನೆಮನದಲ್ಲೂ ಮಾತಾದರೇ ತಾನೇತಾನಾಗಿ ಇಡೀ ಭಾರತಕ್ಕೆ ಮಾದರಿ ಆಗುತ್ತದೆ. ಅಂತಹ ಕೆಲಸ ನಿಮ್ಮದಾಗಲಿ ಎಂದು ಆಶಿಸಿದರು.

ಇನ್ನು ಈ ವಿ-ಪೇ ಸಂಸ್ಥೆಯ ಪ್ರತಿಯೊಬ್ಬ ಪ್ರತಿನಿಧಿ ಕೂಡ ನಿಮ್ಮ ನಿಮ್ಮ ರೈತರನ್ನ, ಕನ್ನಡಮನಸ್ಸುಗಳನ್ನು ಒಟ್ಟುಗೂಡಿಸಿದರೇ ವಿಶ್ವಾಸ್ ವಿ-ಪೇ ಪ್ರತಿಯೊಂದು ಮನೆಯನ್ನು ತಲುಪುತ್ತೆ, ಅದರ ಮುಖಾಂತರ ಅದು ನಿಜವಾದ ಭಾರತೀಯತೆಯನ್ನು ಹೇಳುತ್ತಾ ಹೋಗುತ್ತೆ. ಭಾರತೀಯತೆ ಅಂದ್ರೆ ಪ್ರತಿವೊಂದು ರಾಜ್ಯವೂ ತನ್ನತನವನ್ನ ಹೇಳಿದಾಗ ಅದು ಭಾರತೀಯತೆಯೇ ಆಗಿರುತ್ತೆ. ಎಲ್ಲ ಸಂಸ್ಕøತಿಗಳ ಆಗರ ಭಾರತ. ಭಾರತೀಯ ಪರಂಪರೆ ನಮಗೆ ತಿಳಿಸಿರುವಂತಹ ಗುರು ಕಾಣಿಕೆ ಏನಿದೆ, ಅದನ್ನ ನಾವೀಗ ಸಲ್ಲಿಸುತ್ತಿದ್ದೇವೆ. ಗುರು ಕಾಣಿಕೆ ಸಲ್ಲಿಸೋಕೆ ಇದೊಂದು ವೇದಿಕೆ ಸಜ್ಜಾಗಿದೆ. ವಿ-ಪೇ ಅನ್ನೋದು ವಿ ಅರ್ನ್ ಅನ್ನುವಾಗೇ ಆಗಲಿ, ವಿ-ಪೇ ಭಾರತಕ್ಕೆ ಮಾದರಿ ಆಗಲಿ ಎಂದು ಆಶಿಸಿದರು.

vishwas tech pvt ltd 01 1

ಮುಖ್ಯವಾಗಿ ರೈತರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ವಿ ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಅಭಿವೃದ್ದಿಪಡಿಸಲಾಗಿದೆ. ವಿ ಪೇ- ಆಪ್ ಮುಖಾಂತರ ಹಣ ವರ್ಗಾವಣೆ, ಎಲ್ಲಾ ರೀತಿಯ ಮೊಬೈಲ್ ರಿಚಾರ್ಜ್, ಡಿಶ್ ರಿಚಾರ್ಜ್, ವಿದ್ಯುತ್ ಬಿಲ್ ಗಳನ್ನು ಪಾವತಿ ಮಾಡಬಹುದಾಗಿದೆ.

ಇನ್ನು ವಿ-ಕಾರ್ಡ್ ಮೂಲಕ ಗ್ರಾಹಕರು ಸದಸ್ಯತ್ವ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಸದಸ್ಯತ್ವ ಪಡೆದುಕೊಂಡವರಿಗೆ ಸಂಸ್ಥೆಯಿಂದ ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಕಡಿಮೆ ಬಡ್ಡಿ ದರದಲ್ಲಿ 24 ಗಂಟೆಯೊಳಗಡೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗೇ ರೈತ ವ್ಯವಸಾಯಕ್ಕೆ ಬಳಸುವ ಉಪಕರಣಗಳು, ಗೃಹ ಬಳಕೆಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಖರೀದಿಗೂ ವಿ ಪೇ ಆಪ್ ಮತ್ತು ವಿ-ಕಾರ್ಡ್ ಉಪಯೋಗವಾಗಲಿದೆ. ವಿ ಪೇ ಆಪ್ ಮತ್ತು ವಿ-ಕಾರ್ಡ್ ಮೂಲಕ ಖರೀದಿ ಮಾಡಿದಾಗ ಅತ್ಯಾಕರ್ಷಕ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಪ್ರತಿ ತಾಲೂಕಿನಲ್ಲಿ ವಿ ಪೇ ಆಪ್ ಮತ್ತು ವಿ-ಕಾರ್ಡ್ ಫ್ರಾಂಚೈಸಿಗಳನ್ನು ಹೊಂದಿದೆ. ಈ ಫ್ರಾಂಚೈಸಿಗಳ ಮೂಲಕ ಗ್ರಾಹಕರು ವಿ ಪೇ ಆಪ್ ಮತ್ತು ವಿ-ಕಾರ್ಡ್ ಬಳಕೆ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಾಸ್ ಟೆಕ್ ಪ್ರೈವೆಟ್ ಲಿಮಿಟೆಡ್ ನ ಎಂಡಿ ಎನ್. ವಿಶ್ವ, ನಿರ್ದೇಶಕರಾದ ಸಂಗಮೇಶ್ ಮತ್ತು ಯಲ್ಲಪ್ಪ ಅವರು ಉಪಸ್ಥಿತರಿದ್ದರು.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಆಪ್ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665.

ShareTweetSendShare

Discussion about this post

Related News

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ  : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ  ಎಂಟ್ರಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್