crossorigin="anonymous"> Justice UU Lalit : ಮಕ್ಕಳು 7 ಗಂಟೆಗೆ ಶಾಲೆಗೆ ಹೋಗುವುದಾದ್ರೆ ಕೋರ್ಟ್ 9ಗಂಟೆಗೆ ತೆರೆಯಬಾರದ್ಯಾಕೆ : ನ್ಯಾ.ಲಲಿತ್ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Justice UU Lalit : ಮಕ್ಕಳು 7 ಗಂಟೆಗೆ ಶಾಲೆಗೆ ಹೋಗುವುದಾದ್ರೆ ಕೋರ್ಟ್ 9ಗಂಟೆಗೆ ತೆರೆಯಬಾರದ್ಯಾಕೆ : ನ್ಯಾ.ಲಲಿತ್

Radhakrishna Anegundi by Radhakrishna Anegundi
15-07-22, 4 : 34 pm
in ದೇಶ
when-our-children-go-to-school-early-why-cant-we-hold-court-at-930-am-justice-uu-lalit-bench
Share on FacebookShare on TwitterWhatsAppTelegram

ಸುಪ್ರೀಂಕೋರ್ಟ್ ನಡೆ ನಿಜಕ್ಕೂ ಶ್ಲಾಘನೀಯ ( Justice UU Lalit ). ಹೀಗೆ ಸರ್ಕಾರಿ ಅಧಿಕಾರಿಗಳು ಕರೆಕ್ಟ್ ಆಗಿ 10 ಗಂಟೆಗೆ ಕಚೇರಿಗೆ ಬಂದ್ರೆ ಚೆನ್ನಾಗಿತ್ತು

ನವದೆಹಲಿ : ಮಕ್ಕಳು ಶಾಲೆಗೆ 7 ಗಂಟೆಗೆ ಹೋಗುವುದಾದ್ರೆ, ಕೋರ್ಟ್ 9 ಗಂಟೆಗೆ ತನ್ನ ಕೆಲಸ ಪ್ರಾರಂಭಿಸಬಹುದಲ್ಲವೇ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಯು.ಯು ಲಲಿತ್ ಹೇಳಿದ್ದಾರೆ. ( Justice UU Lalit ) ಶುಕ್ರವಾರ ಸುಪ್ರೀಂಕೋರ್ಟ್ ನಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮಾತನಾಡಿದ ಅವರು ಮಕ್ಕಳು ಅಷ್ಟು ಬೇಗ ಶಾಲೆಗೆ ಹೋಗುವುದಾದ್ರೆ ನಾವು ಯಾಕೆ ಬೆಳಗ್ಗೆ 9 ಗಂಟೆಗೆ ಕೋರ್ಟ್ ಕಲಾಪ ಆರಂಭಿಸಬಾರದು ಅಂದರು.

ಶುಕ್ರವಾರವಾದ ಇಂದು ಕೋರ್ಟ್ ಕಲಾಪ ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಅಂದ್ರೆ 9.30ಕ್ಕೆ ಪ್ರಾರಂಭವಾಗಿತ್ತು. ಈ ವೇಳೆ ಜಾಮೀನು ಅರ್ಜಿಯೊಂದರ ಕುರಿತಂತೆ ವಿಚಾರಣೆಗೆ ಹಾಜರಾದ ಅಟಾರ್ನಿ ಜನರ್ ಮುಕುಲ್ ರೋಸ್ಟಗಿ, ಬೇಗ ಕಲಾಪ ಪ್ರಾರಂಭಿಸಿರುವುದಕ್ಕೆ ನ್ಯಾಯಾಲಯವನ್ನು ಅಭಿನಂದಿಸಿದರು.

ಇದನ್ನೂ ಓದಿ : videos ban in govt offices : ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ವಿಡಿಯೋ ಮಾಡುವಂತಿಲ್ಲ : ರಾಜ್ಯ ಸರ್ಕಾರ ಆದೇಶ

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಲಲಿತ್, ಕಲಾಪ ಬೇಗ ಪ್ರಾರಂಭವಾಗಬೇಕು ಅನ್ನುವುದು ನನ್ನ ನಿಲುವು. 9 ಗಂಟೆಗೆ ಕಲಾಪ ಪ್ರಾರಂಭಿಸಬೇಕು. ಮಕ್ಕಳು ಶಾಲೆಗೆ 7 ಗಂಟೆಗೆ ಹೋಗುವುದಾದ್ರೆ ನಾವು ಯಾಕೆ 9 ಗಂಟೆಗೆ ಕೋರ್ಟ್ ಕಲಾಪ ಪ್ರಾರಂಭಿಸಬಾರದು.

ಸುಪ್ರೀಂಕೋರ್ಟ್ ಕಲಾಪ 9 ಗಂಟೆಗೆ ಪ್ರಾರಂಭವಾಗಬೇಕು. ಮಧ್ಯಾಹ್ನ 11.30ಕ್ಕೆ ಅರ್ಧ ಗಂಟೆ ವಿರಾಮ. 12 ಗಂಟೆಗೆ ಮತ್ತೆ ಕಲಾಪ ಪ್ರಾರಂಭವಾಗಿ 2 ಗಂಟೆಗೆ ಮುಗಿಸಬೇಕು. ಇದರಿಂದ ನಮಗೆ ಹೆಚ್ಚು ಸಮಯ ಸಿಗುತ್ತದೆ. ಇದರಿಂದ ಹೊಸ ವಿಚಾರಣೆಗೆ ಹೆಚ್ಚು ಹೊತ್ತು ತೆಗೆದುಕೊಳ್ಳುವುದಿಲ್ಲ ಅಂದಿದ್ದಾರೆ.

ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಕುಮಾರಸ್ವಾಮಿ ಒಡೆತನದ ಕಸ್ತೂರಿ ನ್ಯೂಸ್

ಪಬ್ಲಿಕ್ ಟಿವಿ ಮತ್ತು ಸುವರ್ಣ ವಾಹಿನಿ ನಡುವಿನ TRP ಸಮರದಲ್ಲಿ ರಂಗನಾಥ್ ಮಾಲೀಕತ್ವದ ಪಬ್ಲಿಕ್ ವಾಹಿನಿ ಜಯ ಸಾಧಿಸಿದೆ

ಯಾವುದೇ ಉಪಗ್ರಹ ಆಧಾರಿತ ವಾಹಿನಿಗಳು ಉಸಿರಾಡಬೇಕಾದರೆ TRP ಅನ್ನುವುದು ಬಲು ಮುಖ್ಯ. ಜಾಹೀರಾತುಗಳು ಹರಿದು ಬರುವುದೇ ಈ TRP ಮಾನದಂಡದ ಜನಪ್ರಿಯತೆಯ ಮೂಲಕ. ಕಳೆದ ಹಲವು ವಾರಗಳ ಕಾಲ ನಿಂತು ಹೋಗಿದ್ದ ಈ TRP ಕೊಡುವ ಕ್ರಮ ಇದೀಗ ಮತ್ತೆ ಪ್ರಾರಂಭವಾಗಿದೆ. ಹೀಗಾಗಿ TRP ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಲು ಎಲ್ಲಾ ವಾಹಿನಿಗಲು ಇನ್ನಿಲ್ಲದ ಸರ್ಕಸ್ ನಡೆಸುತ್ತವೆ.

ಇದೀಗ ಕರ್ನಾಟಕದ 27ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದ್ದು, ಕರ್ನಾಟಕದ ಸುದ್ದಿ ವಾಹಿನಿಗಳು ನಿರೀಕ್ಷೆಯಂತೆ ಸ್ಥಾನ ಹಂಚಿಕೊಂಡಿದೆ. Telivision rating point ಪಟ್ಟಿಯಲ್ಲಿ ಎಂದಿನಂತೆ ಟಿವಿ9 ಮೊದಲ ಸ್ಥಾನದಲ್ಲಿದ್ದು ಅದನ್ನು ಸೋಲಿಸಲು ಸಾಧ್ಯವೇ ಇಲ್ಲ ಅನ್ನುವಂತಾಗಿದೆ.

ಇನ್ನು ಹೇಗಾದರೂ ಸರಿ ಸುವರ್ಣ ಸುದ್ದಿವಾಹಿನಿಯನ್ನು ಪಕ್ಕಕ್ಕೆ ಸರಿಸಿ ಎರಡನೇ ಸ್ಥಾನಕ್ಕೆ ಏರಬೇಕು ಅನ್ನುವ ಪಬ್ಲಿಕ್ ಟಿವಿಯ ಕನಸು ಮತ್ತೆ ಈ ವಾರ ನನಸಾಗಿದೆ. ಕಳೆದ ವಾರದಂತೆ ಈ ವಾರವೂ ಪಬ್ಲಿಕ್ ಟಿವಿಯ TRP ಎರಡನೇ ಸ್ಥಾನದಲ್ಲಿದೆ.

ಹಾಗಾದ್ರೆ ಹೇಗಿದೆ ಈ ವಾರದ ನ್ಯೂಸ್ ಚಾನೆಲ್ ಗಳ ಟಿ.ಆರ್.ಪಿ

1.ಟಿವಿ9 ಕನ್ನಡ -84.17

2. ಪಬ್ಲಿಕ್ ಟಿವಿ-43.83

3. ಏಷಿಯನ್ ನೆಟ್ ಸುವರ್ಣ ನ್ಯೂಸ್- 37.17

4. ನ್ಯೂಸ್ 18 ಕನ್ನಡ- 26.61

5. ನ್ಯೂಸ್ ಫಸ್ಟ್-22.31

6. ದಿಗ್ವಿಜಯ 24×7 ನ್ಯೂಸ್- 15.45

7.ಪವರ್ ಟಿವಿ- 11.85

8.ಟಿವಿ 5 ಕನ್ನಡ- 2.95

9.ರಾಜ್ ನ್ಯೂಸ್ ಕನ್ನಡ- 2.33

10.ಕಸ್ತೂರಿ ನ್ಯೂಸ್- 2.16

Tags: FEATURED
ShareTweetSendShare

Discussion about this post

Related News

ಮುಸ್ಲಿಂ ವಿವಾಹ ವಿಚ್ಛೇದನ ಕಾನೂನು ರದ್ದುಗೊಳಿಸಿದ ಅಸ್ಸಾಂ

ಮುಸ್ಲಿಂ ವಿವಾಹ ವಿಚ್ಛೇದನ ಕಾನೂನು ರದ್ದುಗೊಳಿಸಿದ ಅಸ್ಸಾಂ

ಕಾಲರಾ ರೋಗಕ್ಕೆ ಲಸಿಕೆ ಬಿಡುಗಡೆ ಮಾಡಿದ ಭಾರತ್ ಬಯೋಟೆಕ್

ಕಾಲರಾ ರೋಗಕ್ಕೆ ಲಸಿಕೆ ಬಿಡುಗಡೆ ಮಾಡಿದ ಭಾರತ್ ಬಯೋಟೆಕ್

ಇ-ಕಾಮರ್ಸ್ ವಿಸ್ತರಣೆ ಕಳವಳಕಾರಿ – ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯ

ಇ-ಕಾಮರ್ಸ್ ವಿಸ್ತರಣೆ ಕಳವಳಕಾರಿ – ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯ

ಪೋಲೆಂಡಿಂದ ಉಕ್ರೇನ್ ರೈಲಿನಲ್ಲಿ ನರೇಂದ್ರ ಮೋದಿ ಪ್ರಯಾಣ : ಹೇಗಿದೆ ಗೊತ್ತಾ Rail force one

ಸುರಿಯೋ ಮಳೆಯ ನಡುವೆ ರೈತರಿಗೆ ಕೊಡೆ ಹಿಡಿದು ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ಭಾರತ- ಮಾಲ್ಡೀವ್ಸ್ ನಡುವಣ ಸಹಕಾರ ವೃದ್ಧಿ – ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್

ವಿಯೆಟ್ನಾಂ ಪ್ರಧಾನಿ ಮಿನ್ ಚಿನ್ ಭಾರತ ಭೇಟಿ – ಪ್ರಧಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ

ಮಾರಿಷಸ್‌ನಲ್ಲಿ ಕೇಂದ್ರ ಸಚಿವ ಎಸ್. ಜೈಶಂಕರ್

 ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ : ಕೇಂದ್ರ ಗೃಹ ಸಚಿವ ಅಮಿತ್ ಷಾ

ಡೆಂಘೀ ನಿಯಂತ್ರಣ ಕುರಿತು ಕೇಂದ್ರದಿಂದ ಪರಾಮರ್ಶೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್