ಬೆಂಗಳೂರು : ಅಕ್ರಮ ಗೋಹತ್ಯೆ ಹಾಗೂ ಅಕ್ರಮ ಗೋ ಸಾಗಾಟದ ಮೇಲೆ ನಿಷೇಧ ಹೇರುವ ಸಲುವಾಗಿ ಒತ್ತಡ ತೀವ್ರವಾಗುತ್ತಿದೆ.
ಗೋಶಾಲೆಗಳಿಗೆ ನುಗ್ಗುವ ಖದೀಮರು ಗೋವುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಹಟ್ಟಿಗಳಿಗೆ ನುಗ್ಗುವ ದುಷ್ಕರ್ಮಿಗಳು ಮನೆ ಮಂದಿಯನ್ನು ಬೆದರಿಸಿ ಹಸುಗಳನ್ನು ಅಮಾನವೀಯವಾಗಿ ಒಯ್ಯುತ್ತಿದ್ದಾರೆ.
ಈ ಎಲ್ಲಾ ಆಟಾಟೋಪಗಳಿಗೆ ಬ್ರೇಕ್ ಹಾಕುವ ಸಲುವಾಗಿ ಗೋಹತ್ಯೆ ನಿಷೇಧ ಕಾಯ್ದೆ ಮಂಡಿಸುವಂತೆ ಗೋಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.
ಆದರೆ ಈ ಕಾಯ್ದೆ ವಿರುದ್ಧ ನಿಂತಿರುವ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಗಳಿಗೆ ಎಲ್ಲಿ ಏಟಾಗುತ್ತದೋ ಅನ್ನುವ ಆತಂಕದಲ್ಲಿದೆ. ಹೀಗಾಗಿ ಗೋವನ್ನು ದೇವರೆಂದು ಪ್ರೀತಿಸುವವರ ವಿರುದ್ಧ ನಿಂತಿದೆ.
ಈ ನಡುವೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದರೆ ಹೋರಾಟ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಚುನಾವಣಾ ನೀತಿ ಸಂಹಿತೆಯ ನಡುವೆಯೇ ಗೋಹತ್ಯೆ ನಿಷೇಧ ಕಾಯಿದೆಯಂತಹ ಮತದಾರರ ಮೇಲೆ ಪ್ರಭಾವ ಬೀರುವ ಕಾಯ್ದೆ ಜಾರಿಗೆ ತರಲು ಹೊರಟಿದೆ ಎಂದು ದೂರಿದ್ದಾರೆ.
Discussion about this post