ಬೆಂಗಳೂರು : ಕೊರೊನಾ ಅಬ್ಬರದಿಂದ ದೇಶ ತತ್ತರಿಸಿ ಹೋಗಿದೆ. ವೈರಸ್ ಆತಂಕದ ನಡುವೆ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಂಕಷ್ಟದ ಸಮಯದಲ್ಲಿ ದೇಶ ಒಟ್ಟಾಗಬೇಕಿದೆ ಅಂದಿದ್ದರು.
ಲಾಕ್ಡೌನ್ನ್ನು ಶಿಕ್ಷೆ ಎಂದು ಪರಿಗಣಿಸದೇ ಎಲ್ಲಾ 130 ಕೋಟಿ ಭಾರತೀಯರ ಒಗ್ಗಟ್ಟಿಗೆ ಸಾಕ್ಷಿ ಎಂದು ಭಾವಿಸಬೇಕು ಎಂದು ಪ್ರಧಾನಿ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ಒಗ್ಗಟ್ಟಿನ ಪ್ರದರ್ಶನದ ಭಾಗವಾಗಿ ಇಂದು ರಾತ್ರಿ 9 ಗಂಟೆಗೆ ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ದೀಪ ಉರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ದೀಪ ಉರಿಸಲಾಗದ ಮಂದಿ ಕ್ಯಾಂಡಲ್ ಹಾಗೂ ಮೊಬೈಲ್ ಟಾರ್ಚ್ಗಳನ್ನೂ ಹಚ್ಚಿ ಒಗ್ಗಟ್ಟು ಪ್ರದರ್ಶಿಸಬಹುದಾಗಿದೆ.

ದೇಶದ ಸೇವಕ ಎಂದು ಕರೆಸಿಕೊಂಡಿರುವ ಪ್ರಧಾನಿ ಹೇಳಿದ್ರು ಅಂತಾ ಸುಮ್ನೆ ದೀಪ ಹಚ್ಚಿ ಬರುವುದೇ ಖಂಡಿತಾ. ಅಲ್ಲ. ನಮ್ಮ ನಮ್ಮ ಧರ್ಮಗಳಲ್ಲಿ ಹೇಳಿದಂತೆ ಮಂತ್ರಗಳನ್ನು, ಪಾರ್ಥನೆಯನ್ನು ಮಾಡುವುದು ಉತ್ತಮ.

ಇನ್ನು ದೀಪವನ್ನು ಹಚ್ಚುವ ಕುರಿತಂತೆ ಧರ್ಮ ಗ್ರಂಥಗಲು ಹಲವು ಜಾಗಗಳನ್ನು ಉಲ್ಲೇಖಿಸಿದೆ. ಹಾಗಂತ ಲಾಕ್ ಡೌನ್ ಸಂದರ್ಭದಲ್ಲಿ ನಾವು ಮನೆಯ ಬಾಲ್ಕನಿ ಅಥವಾ ತಾರಸಿ ಮೇಲೆ ದೀಪ ಹಚ್ಚೋಣ.

ಹಾಗಾದ್ರೆ ದೀಪವನ್ನು ಹಚ್ಚುವುದು ಹೇಗೆ, ಯಾವ ದಿಕ್ಕಿನಲ್ಲಿ ದೀಪ ಹಚ್ಚಬೇಕು ಅನ್ನುವ ಕುರಿತಂತೆಯೂ ಧರ್ಮ ಗ್ರಂಥಗಳು ಮಾಹಿತಿಯನ್ನು ಕೊಟ್ಟಿದೆ.

ಇದೀಗ ಪ್ರಧಾನ ಮಂತ್ರಿ ದೀಪ ಹಚ್ಚಲು ಮನವಿ ಮಾಡಿದ್ದಾರೆ. ಆದರೆ ಮೋದಿ ಹೇಳಿದ್ದನ್ನು ವಿರೋಧಿಸಲೇಬೇಕು ಎಂದು ನಿರ್ಧರಿಸಿದವರು ಇದನ್ನು ಟೀಕಿಸುತ್ತಿದ್ದಾರೆ. ಟೀಕಿಸುವವರು ಟೀಕಿಸುತ್ತೀರಲಿ. ಅವರಿಗೂ ಒಳ್ಳೆಯದಾಗ್ಲಿ ಅನ್ನುವ ಪ್ರಾರ್ಥನೆಯೊಂದಿಗೆ ಇವತ್ತು ರಾತ್ರಿ ನಾವು ದೀಪ ಹಚ್ಚೋಣ.

ಈ ಲೇಖನದೊಳಗಿರುವ ಇಮೇಜ್ ಗಳನ್ನು ಮೂಗೂರು ದೀಕ್ಷಿತ್ ಅವರ ಸಾಮಾಜಿಕ ಖಾತೆಯಿಂದ ಪಡೆದುಕೊಳ್ಳಲಾಗಿದೆ.
Discussion about this post