crossorigin="anonymous"> ಮರದ ಗಾಣದ ಎಣ್ಣೆಯ ಉದ್ದಿಮೆಗೆ ಕೈ ಹಾಕಿದ ಸಾಗರದ ಸಾಹಸಿಗರು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮರದ ಗಾಣದ ಎಣ್ಣೆಯ ಉದ್ದಿಮೆಗೆ ಕೈ ಹಾಕಿದ ಸಾಗರದ ಸಾಹಸಿಗರು

Radhakrishna Anegundi by Radhakrishna Anegundi
13-10-21, 8 : 13 am
in ಕೃಷಿ
Wood pressed oil in sagara eat pure be sure
Share on FacebookShare on TwitterWhatsAppTelegram

ಬೆಂಗಳೂರು : ಕೊರೋನಾ ಬಳಿಕ ಜನರಲ್ಲಿ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿ ಬಂದಿದೆ. ಆದರೆ ಟಿವಿಗಳಲ್ಲಿ ಬರುವ ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತು ಜನರನ್ನು ಸುಲಭವಾಗಿ ಮೋಸ ಮಾಡುತ್ತದೆ. ಅದಕ್ಕೊಂದು ಬೆಸ್ಟ್ ಏಕ್ಸಾಂಪಲ್ ಅಡುಗೆ ಎಣ್ಣೆ.

ವಿವಿಧ ಕಂಪನಿಗಳ ಅಡುಗೆ ಎಣ್ಣೆಯ ಜಾಹೀರಾತು ನೋಡಿದರೆ ಅದ್ಯಾವ ವೈದ್ಯರೇ ಬೇಡ, ಇವರ ಕಂಪನಿಯ ಎಣ್ಣೆಯಲ್ಲಿ ಕರಿದ ತಿಂಡಿ ತಿಂದ್ರೆ ಬೊಜ್ಜು ಬರುವುದೇ ಇಲ್ಲ, ಹೃದಯದ ಸಮಸ್ಯೆ ಕಾಣಿಸಿಕೊಳ್ಳುವುದೇ ಇಲ್ಲ. ಇಂತಹ ಸುಳ್ಳು ಜಾಹೀರಾತುಗಳಿಗೆ ಸಿನಿಮಾ ನಟರ ಸಾಥ್ ಬೇರೆ. ಕಾಸಿನಾಸೆಗೆ ನಟಿಸುವ ಇವರಿಗೂ ಈ ಎಣ್ಣೆಯಿಂದ ಆಗಬಹುದಾದ ಅನಾಹುತದ ಅರಿವು ಇರುವುದಿಲ್ಲ. ಮೂರು ಕೆಜಿ ಶೇಂಗಾ ರುಬ್ಬಿದರೆ ಒಂದು ಕೆಜಿ ಶುದ್ಧ ಎಣ್ಣೆ ಸಿಗುತ್ತದೆ, ಉಳಿದದ್ದು ಹಿಂಡಿ. ದನಗಳಿಗಷ್ಟೇ ಕೊಡಬಹುದು. ಹೀಗಾಗಿ ನೂರು ರೂಪಾಯಿ ಬೆಲೆಯ ಶೇಂಗಾ ಬೀಜಕ್ಕೆ ಏನಿಲ್ಲ ಅಂದರೂ 300 ರೂಪಾಯಿ ಅಸಲು. ಆದರೆ ಮಾರುಕಟ್ಟೆಯಲ್ಲಿ ನೂರು ರೂಪಾಯಿಯ ಅಕ್ಕ ಪಕ್ಕಕ್ಕೆ ಎಣ್ಣೆ ಮಾರಾಟ ಮಾಡಲಾಗುತ್ತಿದೆ. ನಷ್ಟ ಮಾಡಿ ಎಣ್ಣೆ ಮಾರಲು ಅವರಿಗೆ ಹುಚ್ಚು ಹಿಡಿದಿದೆಯೇ ಖಂಡಿತಾ ಇಲ್ಲ. ಅವರ ನಷ್ಟವನ್ನು ಸರಿತೂಗಿಸಲು ಪ್ಯಾರಾಫಿನ್ ಇದೆಯಲ್ವ.

ಹಾಗೇ ನೋಡಿದರೆ ಆರೋಗ್ಯಕ್ಕೆ ಒಂದಿಷ್ಟು ಉತ್ತಮ ಅನ್ನಿಸಿಕೊಂಡಿರುವುದು ಗಾಣದಿಂದ ತೆಗೆದ ಎಣ್ಣೆ, ಕಲಬೆರಕೆ ಇಲ್ಲದ ಗಾಣದ ಎಣ್ಣೆಗಳು ಜೇಬಿಗೆ ಭಾರವಾದರೂ ಆರೋಗ್ಯಕ್ಕೆ ಹಿತವಾಗಿರುತ್ತದೆ. ಹೀಗಾಗಿಯೇ ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಉತ್ಸಾಹಿ ಯುವಕರು ಗಾಣದ ಉದ್ಯಮಕ್ಕೆ ಕೈ ಹಾಕಿದ್ದಾರೆ.

ಈ ಪೈಕಿ ನಾವು ಇವತ್ತು ಪರಿಚಯಿಸುತ್ತಿರುವುದು ಸಾಗರದ ರಾಜೀವ ಮತ್ತು ಮಾಧವ. ಇಬ್ಬರು ಜೊತೆಗೆ ಸೇರಿ ಸಾಗರದಲ್ಲಿ ಮರದ ಗಾಣದ ಎಣ್ಣೆಯ ಉದ್ದಿಮೆಯನ್ನು ಪ್ರಾರಂಭಿಸಿದ್ದಾರೆ. ಮರದ ಗಾಣದ ಎಣ್ಣೆ ಅಂದರೆ ಕೋಲ್ಡ್ ಪ್ರೆಸ್ಡ್ ಆಯಿಲ್. ಅಂದರೆ ಒರಳು ಮತ್ತು ಒನಕೆ ಎರಡೂ ಮರದ್ದೇ ಆಗಿರುವುದರಿಂದ ರುಬ್ಬುವ ಸಂದರ್ಭದಲ್ಲಿ ಘರ್ಷಣೆಯಾಗಿ ಯಾವುದೇ ರೀತಿಯಲ್ಲಿ ಬಿಸಿಯಾಗದೇ ಎಣ್ಣೆಯು ತನ್ನ ಪೋಷಕಾಂಶಗಳನ್ನು ಕಳೆದುಕೊಳ್ಳುವುದಿಲ್ಲ.

ಮೂರು ಲಕ್ಷದ ಮರದ ಎಣ್ಣೆ ಗಾಣವೂ ಸೇರಿದಂತೆ ಐದೂವರೆ ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಈ ಯುವಕರು ದುಬಾರಿ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ‘ಸರಳಾ’ ಬ್ರಾಂಡಿನಲ್ಲಿ ಸದ್ಯಕ್ಕೆ ಕೊಬ್ಬರಿ ಮತ್ತು ಶೇಂಗಾ ಎಣ್ಣೆ ಲಭ್ಯವಿದೆ. ಪ್ರಸ್ತುತ ಒಣ ಕೊಬ್ಬರಿಯನ್ನು ತಿಪಟೂರಿನಿಂದಲೂ, ಶೇಂಗಾ ಬೀಜವನ್ನು ಮಹಾರಾಷ್ಟ್ರದಿಂದಲೂ ಇವರು ತರಿಸುತ್ತಿದ್ದಾರೆ.

ಈಗಾಗಲೇ ಈ ಘಟಕಕ್ಕೆ ಭೇಟಿ ನೀಡಿರುವ ಕೃಷಿ ಬರಹಗಾರ ನಾಗೇಂದ್ರ ಸಾಗರ್ ಸರಳಾ ಬ್ರಾಂಡ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅನುಮಾನವಿಲ್ಲದೆ ಎಣ್ಣೆಯನ್ನು ಖರೀದಿಸಬಹುದಾಗಿದೆ. ಇನ್ನು ಮರದ ಗಾಣದಿಂದ ತೆಗೆಯಲ್ಪಟ್ಟ ಪರಿಶುದ್ಧ ಎಣ್ಣೆ ಬೇಕಾದರೆ ನೀವು ರಾಜೀವ 9449547575 ಮತ್ತು ಮಾಧವ 9449968507 ಅವರನ್ನು ಸಂಪರ್ಕಿಸಬಹುದು.

oil1

ಈ ಲೇಖನಕ್ಕೆ ಇನ್ ಪುಟ್ ಮತ್ತು ಫೋಟೋಗಳನ್ನು ನಾಗೇಂದ್ರ ಸಾಗರ್ ಅವರ ಫೇಸ್ ಬುಕ್ ನಿಂದ ಪಡೆಯಲಾಗಿದೆ.

Tags: FEATURED
ShareTweetSendShare

Discussion about this post

Related News

ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿ ಮೇಳ ಸಹಾಯಕಾರಿ – ಪ್ರಲ್ಹಾದ್ ಜೋಶಿ

ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿ ಮೇಳ ಸಹಾಯಕಾರಿ – ಪ್ರಲ್ಹಾದ್ ಜೋಶಿ

Arecanut Price  : ಕ್ಯಾಂಪ್ಕೊದಲ್ಲಿ ಇಂದಿನ ಅಡಿಕೆ ದರ ಹೀಗಿದೆ   

Arecanut Price  : ಕ್ಯಾಂಪ್ಕೊದಲ್ಲಿ ಇಂದಿನ ಅಡಿಕೆ ದರ ಹೀಗಿದೆ  

arecanut-import-govt-allows-import-of-17000-ton-yr-green-areca-nut-without-mip-condition-from-bhutan

Arecanut import : ಭೂತಾನ್ ನಿಂದ ಅಡಿಕೆ ಆಮದಿಗೆ ನಿರ್ಧಾರ : ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಕೈ ಕೊಟ್ಟ ಬಿಜೆಪಿ

Agriculture : ತೋಟಕ್ಕೆ ವಿಷ ಸುರಿಯುತ್ತೀರಾ…ಕ್ಯಾನ್ಸರ್ ನಿಮ್ಮ ಮನೆಯಂಗಳಕ್ಕೆ ತಲುಪಿದೆ ಅಂದುಕೊಳ್ಳಿ

Areca nut : ನೀವು ಅಡಿಕೆ ಕೃಷಿಕರೇ… ಕೃಷಿ ವಿಜ್ಞಾನಿಯ ಈ ಮಾತನ್ನು ಒಂದ್ಸಲ ಓದಿಕೊಳ್ಳಿ

ಕೆಜಿಗೆ 26 ರೂಪಾಯಿ : ಟೊಮೆಟೋ ದರ ಕುಸಿತ

FACT CHECK  : ಗದ್ದೆಯಲ್ಲಿ ಸಿಕ್ಕ ಮೀನುಗಳಿಗೆ ಸಾವಿರಾರು ರೂಪಾಯಿ : ಸಾವಿರ ರೂಪಾಯಿ ಸಿಕ್ರೆ ಹೆಚ್ಚು

ಕೆಜಿ ಟೊಮೆಟೋಗೆ 70 ರೂಪಾಯಿ : 3 ತಿಂಗಳ ಹಿಂದೆ ಕೆಜಿಗೆ 10 ರೂಪಾಯಿ

ಎರಡು ದಿನದ ತರಬೇತಿ : ತಿಂಗಳಿಗೆ 45 ಸಾವಿರ ದುಡಿಯುವ ಅವಕಾಶ : ಕೃಷಿ ಬಗ್ಗೆ ಆಸಕ್ತಿಯುಳ್ಳವರಿಗೆ ಅವಕಾಶ

ಅಯ್ಯೋ ಭಗವಂತ : ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್