ಯಾದಗಿರಿ : ಲಾಕ್ ಡೌನ್ ಸಂದರ್ಭದಲ್ಲಿ ಕುಂಟು ನೆಪ ಹೇಳಿಕೊಂಡು ರಸ್ತೆಗಿಳಿಯುವವರ ವಿರುದ್ಧ ಖಾಕಿ ಪಡೆ ಇದೀಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪೊಲೀಸರು ಮುಲಾಜಿಲ್ಲದೆ ಕೇಸು ಜಡಿಯುತ್ತಾರೆ ಎಂದು ಗೊತ್ತಿದ್ದರೂ ಅನಗತ್ಯವಾಗಿ ರಸ್ತೆಗೆ ಇಳಿಯುವವರ ಸಂಖ್ಯೆ ಕಡಿಮೆಯಾಗಿಲ್ಲ.
ಕೋಳಿಗೆ ಹುಷಾರಿಲ್ಲ,ನಾಯಿ ಆರೋಗ್ಯ ಕೈ ಕೊಟ್ಟಿದೆ, ಕೊತ್ತಂಬರಿ ಸೊಪ್ಪು ತರಬೇಕು ಹೀಗೆ ಪೊಲೀಸರೇ ಗಾಬರಿ ಬೀಳುವ ಕಾರಣಗಳನ್ನು ಕೊಟ್ಟು ಜನ ಬೀದಿಗಿಳಿಯುತ್ತಿದ್ದಾರೆ. ಹೀಗೆ ಬಂದವರ ಮೇಲೆ ಪೊಲೀಸರು ಕೇಸ್ ಹಾಕಿ ಕಳುಹಿಸುತ್ತಿದ್ದಾರೆ.
ಬೆಳಗ್ಗೆ 9 ಗಂಟೆ ತನಕ ಅಗತ್ಯ ಸಾಮಾನು ಖರೀದಿಗೆ ಅವಕಾಶವಿದ್ದರೂ, ಜನ ಮಾತ್ರ 9.30ಕ್ಕೆ ರಸ್ತೆಗಿಳಿಯುತ್ತಿರುವುದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣ.
ಈ ನಡುವೆ ಯಾದಗಿರಿಯಲ್ಲಿ ಮನೆಯಲ್ಲಿ ಕೂತು ಕೂತು ಬೋರಾಗಿದೆ ಎಂದು ನವದಂಪತಿಗೆ ರಸ್ತೆಗೆ ಇಳಿದಿದ್ದಾರೆ. ಪೊಲೀಸರು ಅಡ್ಡ ಹಾಕಿದ್ರೆ ಯಾವುದಕ್ಕೂ ಇರಲಿ ಎಂದು ಏಫ್ರಾನ್ ಬೇರೆ ಕಾರಿನಲ್ಲಿ ಇಟ್ಟುಕೊಂಡಿದ್ದರು.
ಯಾವಾಗ ಪೊಲೀಸರು ಅಡ್ಡ ಹಾಕಿದರೋ, ಏಫ್ರಾನ್ ಧರಿಸಿಕೊಂಡ ನವ ವಿವಾಹಿತೆ ಕಾರಿನಿಂದ ಇಳಿದಿದ್ದಾಳೆ. ನಾನು ಆಸ್ಪತ್ರೆಯಲ್ಲಿ ನರ್ಸ್ ಡ್ಯೂಟಿಗೆ ಹೋಗುತ್ತಿದ್ದೇನೆ. ನನ್ನ ವ್ಯಾಕ್ಸಿನ್ ಹಾಕಿಸಿಕೊಳ್ಳುಲು ಹೋಗುತ್ತಿದ್ದಾರೆ ಎಂದು ಕಥೆ ಹೇಳಿದ್ದಾಳೆ. ಆದರೆ ಪೊಲೀಸರು ಪ್ರಶ್ನೆ ಮೇಲೆ ಪ್ರಶ್ನೆ ಎಸೆದಾಗ ಅಸಲಿ ಕಥೆ ಬಯಲಾಗಿದೆ. ನವದಂಪತಿಗೆ ಸಂಬಂಧಿಕರ ಮನೆಗೆ ಹೊರಟಿದ್ದರು ಅನ್ನುವುದು ಆಗ ಗೊತ್ತಾಗಿದೆ. ಹೀಗಾಗಿ ಪೊಲೀಸರು ದಂಡ ಕಟ್ಟಿಸಿ ನವದಂಪತಿಯನ್ನು ಬಿಟ್ಟು ಕಳುಹಿಸಿದ್ದಾರೆ
Discussion about this post