ಬೆಂಗಳೂರು : ಪಾರಿವಾಳ ಹಿಡಿಯಲು ಹೋದ ಯುವಕನೊಬ್ಬ 4ನೇ ಅಂತಸ್ತಿನಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು ಭೂಪಸಂದ್ರ ನಿವಾಸಿ ಉಮರ್ ಫಾರೂಕ್ (19) ಎಂದು ಗುರುತಿಸಲಾಗಿದೆ.
ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ಗೂಡು ಕಟ್ಟಿದ್ದ ಪಾರಿವಾಳ ಹಿಡಿಯಲು ರಾತ್ರಿ ಹೋಗಿದ್ದ ಫಾರೂಕ್, ಕಾಲು ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮನೆ ಸಮೀಪ ಇರುವ ಖಾಸಗಿ ಕಾಲೇಜಿನ ಹಾಸ್ಟೆಲ್ ಕಟ್ಟಡದಲ್ಲಿ ಪಾರಿವಾಳ ಗೂಡು ಕಟ್ಟಿರುವುದನ್ನು ಗಮನಿಸಿದ್ದ ಫಾರೂಕ್ ಗೆಳೆಯರ ಜೊತೆ ಸೇರಿ ಪಾರಿವಾಳ ಹಿಡಿಯಲು ಹೋಗಿದ್ದ.
ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಫಾರೂಕ್ ಭೂಪಸಂದ್ರದಲ್ಲಿ ತನ್ನ ತಾಯಿಯ ಜೊತೆ ನೆಲೆಸಿದ್ದ, ಪಾರಿವಾಳದ ಹುಚ್ಚು ಬೆಳೆಸಿಕೊಂಡಿದ್ದ ಈತ ಸಾಕಷ್ಟು ಪಾರಿವಾಳ ಸಾಕಿಕೊಂಡಿದ್ದ ಎನ್ನಲಾಗಿದೆ. ಆದರೆ ಇದೀಗ ಇದೇ ಪಾರಿವಾಳ ಸಾಕುವ ಹುಚ್ಚು ಪ್ರಾಣವನ್ನೇ ಬಲಿ ಪಡೆದಿದೆ.
Discussion about this post